ಜಕ್ರಿಬೆಟ್ಟು: ನೇತ್ರಾವತಿ ನದಿಗೆ ಬಿದ್ದು ಬಡ್ಡಕಟ್ಟೆ ನಿವಾಸಿ ಮೃತ್ಯು
Update: 2019-01-12 05:55 GMT
ಬಂಟ್ವಾಳ, ಜ.12: ಬಂಟ್ವಾಳ ಕಸ್ಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿಯ ಸುಂದರ ಮೂಲ್ಯ (65)ಶನಿವಾರ ಬೆಳಗ್ಗೆ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅಗ್ನಿಶಾಮಕ ದಳದ ಸಹಾಯದಿಂದ ಊರವರ ನೆರವಿನಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.