ಕಳೆದ ತಿಂಗಳು ಮೃತಪಟ್ಟ ಡಿಎಸ್‌ಪಿಯ ಹೆಸರು ವರ್ಗಾವಣೆ ಪಟ್ಟಿಯಲ್ಲಿ!

Update: 2019-01-12 15:24 GMT

ಲಕ್ನೋ,ಜ.12: ಕಳೆದ ತಿಂಗಳೇ ಮೃತಪಟ್ಟಿರುವ ಡಿಎಸ್‌ಪಿ ಸತ್ಯನಾರಾಯಣ ಸಿಂಗ್ ಅವರ ಹೆಸರು ವರ್ಗಾವಣೆಗೊಳ್ಳಲಿರುವ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು,ಇದು ಉತ್ತರ ಪ್ರದೇಶ ಪೊಲೀಸರಿಗೆ ಮುಜುಗರವನ್ನುಂಟು ಮಾಡಿದೆ.

ಈ ತಪ್ಪಿಗಾಗಿ ಕ್ಷಮೆ ಯಾಚಿಸಿರುವ ಡಿಜಿಪಿ ಒ.ಪಿ.ಸಿಂಗ್ ಅವರು,ಇದಕ್ಕಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

‘ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಡಿಎಸ್‌ಪಿ ಸಿಂಗ್ ಹೆಸರು ಸೇರಿರುವುದು ವಿಷಾದನೀಯವಾಗಿದೆ. ಇಂತಹ ತಪ್ಪುಗಳು ಅಕ್ಷಮ್ಯವಾಗಿವೆ. ಇಲಾಖಾ ಮುಖ್ಯಸ್ಥನಾಗಿ ನಾನು ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಮತ್ತು ಈ ತಪ್ಪಿಗಾಗಿ ಕಠಿಣ ಕ್ರಮವನ್ನು ಕೈಗೊಳ್ಳುತ್ತೇನೆ’ ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News