ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಸೆರ್ಕಳ ಆಯ್ಕೆ

Update: 2019-01-13 12:05 GMT

ಬೆಳ್ತಂಗಡಿ, ಜ. 13: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವಾರ್ಷಿಕ ಕೌನ್ಸಿಲ್ ಸಿರಾಜುದ್ಧೀನ್ ಸಖಾಫಿ ಕನ್ಯಾನ ಅಧ್ಯಕ್ಷತೆಯಲ್ಲಿ ಅಲ್-ಖಾದಿಸಿಯ್ಯ ಕ್ಯಾಂಪಸ್ ಕಾವಲ್ಕಟ್ಟೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಸದಸ್ಯ ಸೈಯದ್ ಖುಬೈಬ್ ತಂಙಳ್ ದುಆ: ನೆರವೇರಿಸಿದರು. ರಾಜ್ಯ ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಸದಸ್ಯ ಹಫೀಲ್ ಸಅದಿ ಕೊಡಗು ಉದ್ಘಾಟನೆ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಸುಪ್ರೀಂ ಕೌನ್ಸಿಲ್ ಕನ್ವೀನರ್ ಸಾದಿಕ್ ಮಾಸ್ಟರ್ ಮಲೆಬೆಟ್ಟು ಹಾಗೂ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಹಾಫಿಳ್ ಯಾಕೂಬ್ ಸಅದಿ ನಾವೂರು ತರಗತಿಯನ್ನು ನಡಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫಿಯಾನ್ ಸಖಾಫಿ ಕಾವಲ್ಕಟ್ಟೆ, ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕೆ.ಸಿ.ಎಫ್. ರಿಲೀಫ್ ಸದಸ್ಯ ಸಲೀಂ ಕನ್ಯಾಡಿ ಪ್ರಾಸ್ತಾವಿಕ ಬಾಷಣ ಮಾಡಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ವರದಿಯನ್ನು ವಾಚಿಸಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕ್ಯಾಂಪಸ್ ವರದಿಯನ್ನು ವಾಚಿಸಿದರು.

ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರು ಲೆಕ್ಕಪತ್ರವನ್ನು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಲ್-ಖಾದಿಸಿಯ್ಯ ಶಿಲ್ಪಿ ಕಾವಲ್ಕಟ್ಟೆ ಹಝ್ರತ್ ದುವಾಶೀರ್ವಚನ ನೀಡಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿ ಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ನಂದಾವರ, ಕೋಶಾಧಿಕಾರಿಯಾಗಿ ಕೆ.ಎಂ.ಎಚ್. ಝುಹ್ರಿ ಕೊಂಬಾಳಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಹಮ್ಮದ್ ಅಲಿ ತುರ್ಕಳಿಕೆ, ಉಪಾಧ್ಯಕ್ಷರುಗಳಾಗಿ ಮುನೀರ್ ಅಹಮ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಸಲೀಂ ಹಾಜಿ ಬೈರಿಕಟ್ಟೆ, ಹಾಫಿಳ್ ಮಜೀದ್ ಅಲ್-ಫಾಳಿಲಿ ಸಖಾಫಿ ಗಾಣೆಮಾರ್, ಕಾರ್ಯದರ್ಶಿಗಳಾಗಿ ಜಮಾಲುದ್ಧೀನ್ ಸಖಾಫಿ ಮುದುಂಗಾರುಕಟ್ಟೆ, ರಶೀದ್ ಹಾಜಿ ವಗ್ಗ ಹಾಗೂ ರಫೀಕ್ ಸುರತ್ಕಲ್, ಕಾರ್ಯಕಾರಿ ಸದಸ್ಯರುಗಳಾಗಿ ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ಶರೀಪ್ ಬೆಳ್ತಂಗಡಿ, ಆರೀಫ್ ಝುಹ್ರಿ ಸುರತ್ಕಲ್, ನವಾಝ್ ಸಖಾಫಿ ಮಂಗಳೂರು, ಅಬ್ದುಲ್ ರಹ್ಮಾನ್ ಶರಫಿ ವಿಟ್ಲ, ಜಿ.ಎ. ಇಬ್ರಾಹಿಂ ಉಳ್ಳಾಲ, ಆಬಿದ್ ನಈಮಿ ಬಂಟ್ವಾಳ, ತೌಸೀಫ್ ಸಅದಿ ಮುಡಿಪು, ಪೈಝಲ್ ಝುಹ್ರಿ ಸುಳ್ಯ, ಕೆ.ಎಸ್ ದಾವೂದುಲ್ ಹಕೀಂ ಉಪ್ಪಿನಂಗಡಿ, ಹಮೀದ್ ಮೂಡಬಿದ್ರೆ, ಸಲೀಂ ಪುತ್ತೂರು ಇವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ನಾಯಕ ಅಬ್ದುಲ್ ರಹ್ಮಾನ್ ಪ್ರೆಂಟೆಕ್ ಕೃಷ್ಣಾಪುರ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಇಕ್ಬಾಲ್ ಮಂಗಳಪೇಟೆ, ಮುತ್ತಲಿಬ್ ವೇಣೂರು, ಶಮೀರ್ ಸುಳ್ಯ, ಮಜೀದ್ ಸಖಾಫಿ ಅಮ್ಮುಂಜೆ, ಲತೀಫ್ ಸಖಾಫಿ ಸುಳ್ಯ, ಜಬ್ಬಾರ್ ಕಣ್ಣೂರ್, ಶರೀಫ್ ಸಖಾಫಿ ಕುಪ್ಪೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿದರು. ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News