ಜ.14, ಜ.15ರಂದು ಶಾಂತಿಮೊಗರು ರಸ್ತೆ ಬಂದ್

Update: 2019-01-13 12:07 GMT

ಪುತ್ತೂರು, ಜ. 13: ರಸ್ತೆಯಲ್ಲಿ ಡಾಮರೀಕರಣ ನಡೆಸುವ ಕಾರಣದಿಂದ ಜ.14 ಮತ್ತು ಜ.15ರಂದು ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜ.14 ಮತ್ತು 15ರಂದು ಕುದ್ಮಾರು ಶಾಂತಿಮುಗೇರು ಎಂಬಲ್ಲಿ 0.80 ಕಿಮೀ ವರೆಗಿನ ರಸ್ತೆಯ ಡಾಮರೀಕರಣ ಕಾಮಗಾರಿ ನಡೆಯಲಿದ್ದು, ಈ ಸಂದರ್ಭದಲ್ಲಿ ಸದರಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶಗಳಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News