ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು
Update: 2019-01-13 16:38 GMT
ಕಾರ್ಕಳ, ಜ.13: ಪಳ್ಳಿ ಗ್ರಾಮದ ಪುತ್ತಿಬೆಟ್ಟು ಮೇಲ್ಮನೆ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಮೃತ ಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪುತ್ತಿಬೆಟ್ಟು ನಿವಾಸಿ ಶಕುಂತಳ ಶೆಟ್ಟಿ(54) ಎಂದು ಗುರುತಿಸ ಲಾಗಿದೆ. ಇವರು ಜ.4ರಂದು ಬೆಳಗಿನ ಜಾವ ಕೊಟ್ಟಿಗೆಯಲ್ಲಿ ಬಿಸಿ ನೀರು ಕಾಯಿಸುತ್ತಿದ್ದ ಓಲೆಯ ಬೆಂಕಿ ಇವರ ನೈಟಿಗೆ ತಗಲಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಜ.12ರಂದು ಸಂಜೆ 4.30ರ ಸುಮಾರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.