ಪ್ರತಿಭಾ ಸಂಗಮ: ರಾಜ್ಯಮಟ್ಟಕ್ಕೆ ಆಯ್ಕೆ

Update: 2019-01-15 11:55 GMT

ಬಂಟ್ವಾಳ, ಜ. 15: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‍ಜೆಎಂ) ದ.ಕ. ವೆಸ್ಟ್ ಭಾಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮದ ವಿವಿಧ ಸ್ಪರ್ಧೆಗಳಲ್ಲಿ ಪೇರಿಮಾರ್ ದಾರುಲ್ ಉಲೂಂ ಮದರಸ ವಿದ್ಯಾರ್ಥಿಗಳಾದ ಸುಹಾನ್ ಸುಲ್ತಾನ್, ಶಮೀಮ್, ಸಫ್ವಾನ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪೇರಿಮಾರ್ ದಾರುಲ್ ಉಲೂಂ ಮದ್ರಸ, ಎಸ್‍ವೈಎಸ್, ಎಸ್ಸೆಸ್ಸೆಫ್‍ಪೇರಿಮಾರ್ ಶಾಖಾ, ಮಸ್ಜಿದುಳ್ ಖಿಳರ್ ಹಾಗೂ  ಪೇರಿಮಾರ್ ದಾರುಲ್ ಉಲೂಂ ಮದ್ರಸ ಆಡಳಿತ ಸಮಿತಿ ವತಿಯಿಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News