ಕಾರ್ಕಳ: ಸಮುದಾಯದ ನಾಯಕರ ಸಮ್ಮಿಲನ ಕಾರ್ಯಕ್ರಮ

Update: 2019-01-15 15:40 GMT

ಕಾರ್ಕಳ, ಜ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಕಳ ವಲಯದ ವತಿಯಿಂದ ಸಮುದಾಯದ ನಾಯಕರ ಸಮ್ಮಿಲನ ಕಾರ್ಯಕ್ರಮ ವನ್ನು ಇತ್ತೀಚೆಗೆ ಕಾರ್ಕಳ ಮದೀನ ಮಸೀದಿಯಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್ ಮಾತನಾಡಿದರು. ಪಿಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಝ್ ಮಲ್ಪೆ, ಕಾರ್ಕಳ ವಲಯ ಅಧ್ಯಕ್ಷ ರಶೀದ್ ಅಹಮದ್, ಕಾರ್ಯದರ್ಶಿ ಝೀಶಾನ್, ಉಡುಪಿ ವಿಭಾಗದ ಅಧ್ಯಕ್ಷ ಬಶೀರ್ ಅಂಬಾಗಿಲು, ಅಸ್ಲಂ ಕಾರ್ಕಳ, ಎಸ್‌ಡಿಪಿಐ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಫಾಜ್ ದೊಡ್ಡಣ ಗುಡ್ಡೆ, ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಫಾಕ್ ಅಹಮದ್ ಕಾರ್ಕಳ, ಮುಸ್ಲಿಮ್ ಫೆಡರೇಶನ್ ಅಧ್ಯಕ್ಷ ಶಬ್ಬೀರ್ ಅಹಮದ್ ಕಾರ್ಕಳ, ಬೈಲೂರು ತ್ವಾಹಾ ಜುಮಾ ಮಸೀದಿ ಅಧ್ಯಕ್ಷ ಹೈದರ್ ಅಲಿ ಉಪಸ್ಥಿತರಿದ್ದರು.

ಮೌಲಾನ ಜಾಸಿಮುದ್ದೀನ್ ಕಿರಾತ್ ಪಠಿಸಿದರು. ದಿಲ್ ನವಾಝ್ ಬೈಲೂರು ಸ್ವಾಗತಿಸಿದರು. ಮಸೀದಿಯ ಮೌಲಾನ ಇಮಾಮ್ ಶಮಾ ಪ್ರಸ್ತಾವಿಕವಾಗಿ ಮಾತನಾಡಿದರು. ಪಿಎಫ್‌ಐ ಉಡುಪಿ ವಿಭಾಗದ ಕಾರ್ಯದರ್ಶಿ ನೂರ್ ನವಾಝ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News