ಪಡುಕೊಣಾಜೆಯಲ್ಲಿ ಯುವಕನ ಸಂಶಯಾಸ್ಪದ ಸಾವು

Update: 2019-01-15 17:14 GMT

ಮೂಡುಬಿದಿರೆ, ಜ. 15: ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪಡುಕೊಣಾಜೆಯ ಕಿನ್ಯಾಲಬರಿ ಎಂಬಲ್ಲಿ ಯುವಕನೋರ್ವ ರಾತ್ರಿ ಮಲಗಿದ್ದಲ್ಲೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಕೆಂಚರ್ಲಗುಡ್ಡೆ ಬಳಿಯ ಕಿನ್ಯಾಲಬರಿಯ ನಿವಾಸಿ ದಿ.ಪರ್ದೇಶಿ ಮೇರಾ ಅವರ ಪುತ್ರ ಶೇಖರ (35) ಸಾವನ್ನಪ್ಪಿದ ವ್ಯಕ್ತಿ. ಶೇಖರ್ ಅವರು ತನ್ನ ಮನೆ ಬಳಿಯಲ್ಲೇ ಇರುವ ಅಕ್ಕ ಸುಶೀಲ ಮತ್ತು ತಂಗಿ ವಾಸಿಸುತ್ತಿರುವ ತಮ್ಮ ಮೂಲ ಮನೆಯಲ್ಲಿ ಪ್ರತಿದಿನ ರಾತ್ರಿ ಮಲಗುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಸುಶೀಲ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News