ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಡಾ.ವೆಂಕಟಾಚಲ ಜಿ.ಹೆಗಡೆ ಆಯ್ಕೆ

Update: 2019-01-15 17:55 GMT
ಡಾ.ವೆಂಕಟಾಚಲ - ಸಿ.ಎಂ. ನಾಗರಾಜ

ಮಂಗಳೂರು, ಜ.15: ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಜೆಎನ್‌ಯುವಿನ ಪ್ರಾಧ್ಯಾಪಕ ಡಾ.ವೆಂಕಟಾಚಲ ಜಿ.ಹೆಗಡೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ. ನಾಗರಾಜ ನಾಲ್ಕನೇ ಬಾರಿಗೆ ಮರು ಆಯ್ಕೆಗೊಂಡಿದ್ದಾರೆ.

ಎರಡು ವರ್ಷಗಳ (2019-21) ಅವಧಿಗೆ ಜ.13ರಂದು ಚುನಾವಣೆ ನಡೆದಿದ್ದು, ಡಾ.ಅವನೀಂದ್ರನಾಥ್ ರಾವ್ ಮತ್ತು ಜಮುನಾ ಸಿ.ಮಠದ ಉಪಾಧ್ಯಕ್ಷರಾಗಿ, ರಾಧಾಕೃಷ್ಣ ಮತ್ತು ಪೂಜಾ ರಾವ್ ಜಂಟಿ ಕಾರ್ಯದರ್ಶಿಗಳಾಗಿ ಹಾಗೂ ಆಶಾಲತಾ ಎಂ., ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಗೆ ಡಾ.ಎಂ.ಎಸ್. ಶಶಿಕುಮಾರ್, ಶಿವಾನಂದ ಇಂಗಳೇಶ್ವರ, ಎನ್.ಆರ್. ಶ್ರೀನಾಥ್, ಸವಿತಾ ನೆಲ್ಲಿ, ಎಂ.ಶಿವಪ್ಪ, ಸಂತೋಷ ಜೆ., ಶೋಭಾಗೌಡ ಮತ್ತು ಸುಮಿತಾ ಮುರಗೋಡ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಕಾರ್ಪೊರೇಷನ್ ಬ್ಯಾಂಕ್‌ನ ಮಹಾಪ್ರಬಂಧಕ ಶಿವಾನಂದ ಎಸ್.ಹೆಬ್ಬಾರ್ ಮತ್ತು ಜಂಟಿ ಚುನಾವಣಾ ಅಧಿಕಾರಿಯಾಗಿ ಕರ್ನಾಟಕ ಬ್ಯಾಂಕ್‌ನ ಪ್ರಬಂಧಕ ಲಕ್ಷ್ಮೀನಾರಾಯಣ ರಾವ್ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News