ವಿಟ್ಲ: ವಿಠಲ ಪ್ರೌಢಶಾಲೆಯಲ್ಲಿ ವರ್ಲಿ ಚಿತ್ರ ಕಾರ್ಯಾಗಾರ

Update: 2019-01-16 10:14 GMT

ಬಂಟ್ವಾಳ, ಜ.16: ಬಣ್ಣ ಮತ್ತು ವ್ಯಕ್ತಿ ಅದೊಂದು ಅವಿನಾಭಾವ ಸಂಬಂಧ. ಅದು ವಿದ್ಯಾರ್ಥಿ ಜೀವನದಲ್ಲಿ ಅತೀ ಹೆಚ್ಚು ವೌಲ್ಯವನ್ನು ಪಡೆದುಕೊಳ್ಳುವಂತಹ ಕಲೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ವರ್ಲಿ ಕಲೆ ಪೂರಕ ಎಂದು ಶಾಲಾ ಸಂಚಾಲಕ ಎಲ್.ಎನ್. ಕೂಡೂರು ಹೇಳಿದ್ದಾರೆ.

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕು ಚಿತ್ರಕಲಾ ಶಿಕ್ಷಕರಿಗಾಗಿ ಬುಧವಾರ ನಡೆದ ‘ವರ್ಲಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ ಡಿ.ಆರ್. ಮಾತನಾಡಿ, ಪ್ರತಿ ಶಾಲೆಯಲ್ಲೂ ‘ವರ್ಲಿ’ ಕಲೆಯನ್ನು ಬೆಳೆಸಿದರೆ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅಕ್ಷರದ ಬರವಣಿಗೆಯು ಉತ್ತಮವಾಗುತ್ತೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಜೊತೆಗೆ ಇದರಿಂದ ಶಾಲೆಯ ಚಟುವಟಿಕೆಗಳ ಬಗ್ಗೆ ತಿಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳೀಕೃಷ್ಣ ರಾವ್, ಆಡಳಿತ ಮಂಡಳಿಯ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಚಿತ್ರಕಲಾ ಶಿಕ್ಷಕಿ ಜಯಲಕ್ಷ್ಮೀ, ಆಮೀನಾ ಶೇಖ್, ಉಮೇಶ್, ಕಾರ್ಯಕ್ರಮದ ರೂವಾರಿಗಳಾದ ತಾರಾನಾಥ ಕೈರಂಗಳ, ಧನಂಜಯ ಮತ್ತು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉಪಪ್ರಾಂಶುಪಾಲ ಕಿರಣ್ ಕುಮಾರ್ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಉದ್ ವಿಟ್ಲ ವಂದಿಸಿದರು. ರಮೇಶ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News