ಬಸ್ಸು-ಸ್ಕೂಟಿ ಅಪಘಾತ : ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
Update: 2019-01-16 12:57 GMT
ಕಾರ್ಕಳ, ಜ. 16 : ಬಸ್ಸು ಮತ್ತು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದಲ್ಲಿ ಬುಧವಾರ ಸಂಭವಿಸಿದೆ.
ನಕ್ರೆ ನಿವಾಸಿ ಚಾಲಕ ದಿನೇಶ್ (26) ಮೃತರು ಎಂದು ಗುರುತಿಸಲಾಗಿದೆ.
ಮುರುಗೇಶ್ (28) ಮತ್ತು ವೇಲು(30) ಗಂಭೀರ ಗಾಯಗೊಂಡವರು. ಟೆಂಪೋವನ್ನು ಓವರ್ಟೇಕ್ ಮಾಡುವ ಭರದಲ್ಲಿ ಸ್ಕೂಟಿ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.