ಸರಕಾರದಿಂದ ಶೀಘ್ರವೇ ರೈತರಿಗೆ ಭಾರೀ ಕೊಡುಗೆ: ಬಿಜೆಪಿ ರೈತರ ಘಟಕದ ಅಧ್ಯಕ್ಷ

Update: 2019-01-18 16:12 GMT

ಹೊಸದಿಲ್ಲಿ,ಜ.18: ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೇಂದ್ರವು ಶೀಘ್ರವೇ ಘೋಷಿಸಲಿದೆ ಎಂದು ಬಿಜೆಪಿ ರೈತರ ಘಟಕದ ಅಧ್ಯಕ್ಷ ವೀರೇಂದ್ರ ಸಿಂಗ್ ಮಸ್ತ್ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಕ್ಷೇತ್ರಕ್ಕಾಗಿ ಸರಕಾರವು ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಎಂದ ಅವರು,ಸದ್ಯೋಭವಿಷ್ಯದಲ್ಲಿ ರೈತರ ಏಳಿಗೆಗಾಗಿ ಬೃಹತ್ ನಿರ್ಧಾರವೊಂದನ್ನು ಅದು ಕೈಗೊಳ್ಳಲಿದೆ ಎಂದರು.

ರೈತರ ಹಿಡುವಳಿಯನ್ನು ಅವಲಂಬಿಸಿ ಕೆಲ ಕೃಷಿವೆಚ್ಚವನ್ನು ಭರಿಸಲು ಯೋಜನೆಯೊಂದನ್ನು ಕೇಂದ್ರವು ಪ್ರಕಟಿಸಬಹುದು ಎಂಬ ಊಹಾಪೋಹಗಳಿವೆ.

ಆದರೆ ಸಂಭಾವ್ಯ ನಿರ್ಧಾರದ ವಿವರಗಳನ್ನು ಹಂಚಿಕೊಳ್ಳಲು ಮಸ್ತ್ ನಿರಾಕರಿಸಿದರು. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಲ ಮನ್ನಾ ಕಾಯಂ ಪರಿಹಾರವಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News