ಬಿಜೆಪಿ ಪ್ರಯತ್ನ ತಡೆಯಲು ರೆಸಾರ್ಟ್ ರಾಜಕಾರಣ: ಸಚಿವ ಖಾದರ್

Update: 2019-01-19 13:51 GMT

ಮಂಗಳೂರು, ಜ.19: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಬಿಜೆಪಿಯ ಪ್ರಯತ್ನವನ್ನು ಕೊನೆಗಾಣಿಸಲು ಅನಿವಾರ್ಯವಾಗಿ ರೆಸಾರ್ಟ್ ರಾಜಕಾರಣ ಮಾಡಬೇಕಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಬಿಜೆಪಿ ಜೊತೆ ಕೈ ಜೋಡಿಸಲು ರೆಸಾರ್ಟ್‌ಗೆ ತೆರಳಿದ ಕಾಂಗ್ರೆಸ್ ಶಾಸಕರನ್ನು ಬರಮಾಡಿಕೊಳ್ಳಲು ಶಾಸಕಾಂಗ ಸಭೆಯನ್ನು ನಡೆಸಬೇಕಾಯಿತು. ಅಲ್ಲದೆ ಅತೃಪ್ತ ಶಾಸಕರ ಅಹವಾಲು ಆಲಿಸಲು ರೆಸಾರ್ಟ್‌ಗೆ ಹೋಗಬೇಕಾಯಿತು. ಆಪರೇಷನ್ ಕಮಲಕ್ಕೆ ಔಷಧ ನೀಡಲು ಈ ದಾರಿಯನ್ನು ಕಾಂಗ್ರೆಸ್ ಕಂಡುಕೊಳ್ಳಬೇಕಾಯಿತು ಎಂದು ಸಚಿವ ಖಾದರ್ ಸಮರ್ಥಿಸಿದರು.

ಶಾಸಕಾಂಗ ಸಭೆಗೆ ಗೈರಾದ ಅತೃಪ್ತ ಶಾಸಕರ ಪೈಕಿ ನಾಗೇಂದ್ರ ಅವರು ಕಾರಣ ತಿಳಿಸಿದ್ದಾರೆ. ಜಾಧವ್ ಅವರು ಪತ್ರ ಕಳುಹಿಸಿದ್ದಾರೆ. ಗೈರಾದ ಉಳಿದವರ ಬಗ್ಗೆ ಶಾಸಕಾಂಗ ಸಭೆಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಅಪರೇಷನ್ ರಾಜಕಾರಣಕ್ಕೆ ತಾರ್ಕಿಕ ಅಂತ್ಯ ಹಾಕಲು ಕಾಂಗ್ರೆಸ್ ರೆಸಾರ್ಟ್‌ಗೆ ತನ್ನ ಶಾಸಕರನ್ನು ಕರೆದುಕೊಂಡು ಹೋಗಿದೆ ಎಂದು ಸಚಿವ ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News