ಮಂಗಳೂರು: ಹೋಟೆಲ್‌ನಲ್ಲಿ ಬೆಂಕಿ ಅವಘಡ

Update: 2019-01-20 17:51 GMT

ಮಂಗಳೂರು, ಜ.20: ನಗರದ ಅಂಬೇಡ್ಕರ್ ವೃತ್ತದ ಜ್ಯೋತಿ ಚಿತ್ರಮಂದಿರ ಸಮೀಪದ ಮಹಾರಾಜ ರೆಸಿಡೆನ್ಸಿಯಲ್ಲಿ ರವಿವಾರ ಬೆಳಗ್ಗೆ ಬೆಂಕಿ ಅವಘಡ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೋಟೆಲ್‌ನ ಅಡುಗೆ ಕೋಣೆಯಲ್ಲಿನ ಏರ್ ಬ್ಲೋವರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಹೋಟೆಲ್ ಕಾರ್ಮಿಕರು ಅಡುಗೆ ಕೋಣೆಯಿಂದ ಹೊರಗೆ ಬಂದಿದ್ದಾರೆ. ಇದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.

ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತದಿಂದಾಗಿ ಹೊಟೇಲ್‌ನ ಕಿಚನ್‌ರೂಮ್‌ನಲ್ಲಿ ಅಳವಡಿಸಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ವೈರ್ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಿದ ಕಾರ್ಯಾಚರಣೆ ಬಳಿಕ ಫೈರ್ ಆ್ಯಂಡ್ ಸೆಫ್ಟಿ ಬಗ್ಗೆ ಹೋಟೆಲ್ ಸಿಬ್ಬಂದಿಗೆ ಜಾಗೃತಿ ಮೂಡಿಸಿ ಬರಲಾಗಿದೆ ಎಂದು ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಅಣ್ಣಪ್ಪನ್, ಪರಮೇಶ್, ಕ್ರಾಶಾ, ಮಂಜುನಾಥ್ ಮಿರ್ಚಿ, ಮಹಾಂತೇಶ್ ಹಿಟ್ನಾಳ್, ಚಾಲಕ ಕಾರ್ತಿಕ್, ಹೋಮ್‌ಗಾರ್ಡ್ ಜೀವನ್ ರಾಜ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News