ಅವರು ನನ್ನ ಹತ್ಯೆ ನಡೆಸಬಹುದು: ಶಬರಿಮಲೆ ಪ್ರವೇಶಿಸಿದ ಬಿಂದು

Update: 2019-01-22 14:33 GMT

ಕೊಚ್ಚಿ, ಜ. 22: ಅವರು ನನ್ನ ಮೇಲೆ ದಾಳಿ ನಡೆಸಬಹುದು, ನನ್ನನ್ನು ಹತ್ಯೆಗೈಯಬಹುದು. ಆದರೆ, ನನಗೆ ಯಾವುದೇ ಭಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದ ಬಿಂದು ಅಮ್ಮಿಣಿ ಹೇಳಿದ್ದಾರೆ. ಕೊಚ್ಚಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಶಬರಿಮಲೆ ಯಾತ್ರೆ ಮೌಲ್ಯಯುತವಾದುದು ಎಂದಿದ್ದಾರೆ.

ಶಬರಿಮಲೆ ದೇವಾಲಯ ಪ್ರವೇಶ ಹೋರಾಟದ ಅಡಿಯಲ್ಲಿ ಬರಲಾರದು. ಇದು ಸಾಂವಿಧಾನಿಕ ಸಮಾನತೆ ಹಕ್ಕನ್ನು ಅನುಷ್ಠಾನಕ್ಕೆ ತರಲು ನಡೆಸಿದ ಪ್ರಯತ್ನ ಎಂದರು. ಹಲವು ಪ್ರತಿಭಟನಕಾರರು ಸಂಘ ಪರಿವಾರಿಗಳಾಗಿರುವುದರಲ್ಲಿ ಅಚ್ಚರಿ ಏನಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ಮಹಿಳಾ ವಿರೋಧಿ ‘ಬ್ರಾಹ್ಮಣ ಹಿತಾಸಕ್ತಿ’ಯನ್ನು ಪ್ರಚುರಪಡಿಸಲು ಕಟ್ಟಾ ಬಲಪಂಥೀಯರನ್ನು ಪ್ರಚೋದಿಸಿತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News