ಶಬರಿಮಲೆ ದೇವಳ ಪ್ರವೇಶಿಸಿದ್ದ ಮಹಿಳೆಯನ್ನು ಮನೆಯಿಂದ ಹೊರದಬ್ಬಿದ ಕುಟುಂಬಸ್ಥರು
Update: 2019-01-22 16:07 GMT
ತಿರುವನಂತಪುರಂ, ಜ.22: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಬರಿಮಲೆ ದೇವಳ ಪ್ರವೇಶಿಸಿದ್ದ ಕೇರಳದ ಮಹಿಳೆಯನ್ನು ಕುಟುಂಬಸ್ಥರು ಮನೆಯಿಂದ ಹೊರದಬ್ಬಿದ್ದಾರೆ ಎಂದು ವರದಿಯಾಗಿದೆ.
ತನ್ನ ಅತ್ತೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಬರಿಮಲೆ ಪ್ರವೇಶಿಸಿದ್ದ ಕನಕ ದುರ್ಗಾ ಆರೋಪಿಸಿದ್ದು, ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಅವರನ್ನು ದಾಖಲಿಸಲಾಗಿತ್ತು. ಇದೀಗ ಕುಟುಂಬಸ್ಥರು ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಈ ಬಗ್ಗೆ ಕನಕದುರ್ಗಾ ದೂರು ನೀಡಿದ್ದಾರೆ. ಪೊಲೀಸರು ಕನಕದುರ್ಗಾರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮನೆಗೆ ಬೀಗ ಹಾಕಿ ಕನಕದುರ್ಗರ ಪತಿ, ತನ್ನ ತಾಯಿ ಹಾಗು ಇಬ್ಬರು ಮಕ್ಕಳೊಂದಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.