ಶುಜಾ ಆರೋಪದ ಬಗ್ಗೆ ತನಿಖೆ ನಡೆಯಲಿ: ಕಪಿಲ್ ಸಿಬಲ್

Update: 2019-01-22 17:11 GMT

ಹೊಸದಿಲ್ಲಿ, ಜ.22: 2014ರ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿತ್ತು ಎಂಬ ಸೈಯದ್ ಶುಜಾ ಆರೋಪ ವೈಜ್ಞಾನಿಕ ಕಲ್ಪನೆಯಂತಿತ್ತು. ಆದರೆ ಈ ಆರೋಪದ ಬಗ್ಗೆ ಪರಿಶೀಲಿಸುವುದು ಮಾಧ್ಯಮಗಳ ಅಥವಾ ತನಿಖಾ ಸಂಸ್ಥೆಗಳ ಕಾರ್ಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.

ತಾನು ಲಂಡನ್‌ಗೆ ಖಾಸಗಿ ಭೇಟಿ ನೀಡಿದ್ದಾಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂತು. ಕುತೂಹಲದಿಂದ ಪಾಲ್ಗೊಂಡಿದ್ದೇನೆ. ಇಂತಹ ಆಹ್ವಾನ ಬಿಜೆಪಿಗೂ ಬಂದಿದೆ. ಆದರೆ ಈ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News