15ನೇ ಸಾಹಿತ್ಯ ಕಲಾ ಮೇಳ 2019 ಸಮಾರೋಪ

Update: 2019-01-23 04:24 GMT

ವಿಟ್ಲ, ಜ.23: ಸಮಸ್ತ ಕೇರಳ ಜುಂ ಇಯ್ಯತುಲ್ ಮುಅಲ್ಲಿಮೀನ್ ಮಿತ್ತಬೈಲ್ ರೇಂಜ್ ಇದರ 15ನೇ ಸಾಹಿತ್ಯ ಕಲಾ ಮೇಳ 2019 ಗೂಡಿನಬಳಿಯಲ್ಲಿ ಸಮಾಪ್ತಿಗೊಂಡಿತು.

5 ವಿಭಾಗಗಳಲ್ಲಿ ನಡೆದ 21 ಮದ್ರಸಗಳ ಕಾರ್ಯಕ್ರಮಗಳು ಅಮೆಮಾರ್ ಹಾಗೂ ಗೂಡಿನಬಳಿ ಮದ್ರಸಗಳಲ್ಲಿ ಜಮಾಅತ್ ಕಮಿಟಿಯವರ ಸಹಕಾರದೊಂದಿಗೆ ನಡೆಯಿತು.

 ಖಿದ್ಮತುಲ್ ಇಸ್ಲಾಂ ಮದ್ರಸ, ಪರ್ಲಿಯ ಪ್ರಥಮ ಹಯಾತುಲ್ ಇಸ್ಲಾಂ ಮದ್ರಸ, ಗೂಡಿನಬಳಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಹಯಾತುಲ್ ಇಸ್ಲಾಂ ಮದ್ರಸ ಪಲ್ಲಮಜಲು ಪಡೆದುಕೊಂಡಿದೆ.

ಸ್ವಾಗತ ಸಮಿತಿಯ ಚೆಯರ್ ಮ್ಯಾನ್ ಮುಹ್ಸಿನ್ ಫೈಝಿ, ಸ್ಥಳೀಯ ಖತೀಬರುಗಳಾದ ರಿಯಾಝ್ ರಹ್ಮಾನಿ, ಅಬೂ ಸ್ವಾಲಿಹ್ ಫೈಝಿ, ರೇಂಜ್ ಅಧ್ಯಕ್ಷ ಇಬ್ರಾಹಿಂ ದಾರಿಮಿ, ಕಾರ್ಯದರ್ಶಿ ಮುಸ್ತಫ ಫೈಝಿ, ಮ್ಯಾನೇಜ್ಮೆಂಟ್ ಅಧ್ಯಕ್ಷ ಯೂಸುಫ್ ಬದ್ರಿಯಾ, ಕಾರ್ಯದರ್ಶಿ ಅಬ್ದುಸ್ಸಲಾಂ ಮಿತ್ತಬೈಲ್, ಪರೀಕ್ಷಾ ಬೋರ್ಡ್ ಚೆಯರ್ ಮ್ಯಾನ್ ಯೂಸುಫ್ ಮುಸ್ಲಿಯಾರ್, ಮುಹಮ್ಮದ್ ಹಾಜಿ, ಉಮರಬ್ಬ ಹಾಜಿ, ಉಬೈದುಲ್ಲಾ, ಅಬೂ ಸ್ವಾಲಿಹ್ ಮುಸ್ಲಿಯಾರ್, ರಹೀಂ ಅಝ್ಹರಿ, ಇಸ್ಮಾಯಿಲ್ ಮುಸ್ಲಿಯಾರ್, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಶಬೀರ್ ಮುಸ್ಲಿಯಾರ್, ಸ್ಥಳೀಯ ಸದರ್ ಉಸ್ತಾದ್ ಶುಹೈಬ್ ಇರ್ಫಾನಿ, ಮುಹಿಯುದ್ದೀನ್ ಹಸನಿ, ಎಸ್ಕೆೆಸ್ಸೆಸ್ಸೆಫ್ ಅಧ್ಯಕ್ಷ ಮಕ್ಬೂಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ವೀನರ್ ಉಸ್ಮಾನ್ ರಾಝಿ ಬಾಖವಿ  ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News