ಪ್ರಿಯಾನಂದನ್‍ ವಿರುದ್ಧ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ದಾಳಿ- ಮುಖ್ಯಮಂತ್ರಿ ಪಿಣರಾಯಿ ವಿಜಯನ್

Update: 2019-01-25 14:48 GMT

ತಿರುವನಂತಪುರಂ,ಜ.25: ನಿರ್ದೇಶಕ ಪ್ರಿಯಾನಂದನ್ ವಿರುದ್ಧ ನಡೆದಿರುವ ದಾಳಿ ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.ಕೇವಲಒಂದು ಫೇಸ್‍ಬುಕ್ ಪೋಸ್ಟ್‍ನ ಹೆಸರಿನಲ್ಲಿಇವರ ವಿರುದ್ಧ ಕೆಲವು ದಿನಗಳ ಹಿಂದೆ ಸಂಘಪರಿವಾರ ಸಂಘಟನೆಗಳು ಬೆದರಿಕೆ ಮತ್ತು ಸೈಬರ್ ದಾಳಿನಡೆಸಿತ್ತು. 

ಪ್ರಿಯಾನಂದನ್ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಹಲ್ಲೆ  ನಡೆದಿದೆ. ಇದನ್ನು ಯಾರೂ ಸಹಿಸಲಾರರು ಎಂದು ಮುಖ್ಯ ಮಂತ್ರಿ ಹೇಳಿದರು.

ಇದೇವೇಳೆ, ಇರಿಂಞಲಕ್ಕೂಡ ಡಿವೈಎಸ್ಪಿ ಫೆಮಸ್ ವರ್ಗಿಸ್, ನಿರ್ದೇಶಕ  ಪ್ರಿಯಾನಂದನ್‍ರಿಗೆ ಹಲ್ಲೆ ಎಸಗಿದ್ದು ಸರೋವರ್ ಎಂಬ ಆರೆಸ್ಸೆಸ್ ಕಾರ್ಯಕರ್ತನಾಗಿದ್ದುಈತನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News