ಕಾಂಜಿಲಕೋಡಿ: ಬದ್ರುಲ್ ಹುದಾ ಮದ್ರಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ
Update: 2019-01-26 04:45 GMT
ಅಡ್ಡೂರ್, ಜ.26: ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ-ಮಸ್ಜಿದ್ ಮತ್ತು ಮದ್ರಸದ ಆಶ್ರಯದಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ ಇಂದು ಬೆಳಗ್ಗೆ ನಡೆಯಿತು.
ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಧ್ಯಕ್ಷತೆಯಲ್ಲಿ ಖತೀಬ್ ಅಬ್ದುರ್ರಝಾಕ್ ದಾರಿಮಿ ಧ್ವಜಾರೋಹಣ ನೆರವೇರಿಸಿದರು.
ಎಂ.ಎಚ್.ಹಾಜಿ ಅಡ್ಡೂರು ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ದಿಕ್ಸೂಚಿ ಭಾಷಣ ಮಾಡಿದರು.
ಸಿದ್ದೀಕ್ ದಾರಿಮಿ ಕಿನ್ಯ, ಮುನೀರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎ.ಕೆ.ಮುಸ್ತಫಾ, ಆದಂ ಕಳಸಗುರಿ, ಜೊತೆ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ದಾವೂದ್ ಕಳಸಗುರಿ, ಹಸನಬ್ಬ, ಇಕ್ಬಾಲ್ ಕಾಂಜಿಲಕೋಡಿ, ಎ.ಕೆ. ಹಾರಿಸ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹಾರಿಸ್ ಕಳಸಗುರಿ, ಕೋಶಾಧಿಕಾರಿ ಮುಹಮ್ಮದ್ ಸೆರೀಫ್ ಪೊನ್ನೆಲ ಉಪಸ್ಥಿತರಿದ್ದರು.
ಮುಹಿಯುದ್ದೀನ್ ಸಅದಿ ಸ್ವಾಗತಿಸಿ, ಕಾರ್ಯಕ್ರಮ ನಿರುಪಿಸಿದರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.