ಉರಿಮಜಲು: ಎಸ್ ವೈ ಎಸ್ ಪದಾಧಿಕಾರಿಗಳ ಆಯ್ಕೆ

Update: 2019-02-02 06:38 GMT
ಅಬ್ದುಲ್ ಖಾದರ್ ಕಲ್ಲಡ್ಕ

ವಿಟ್ಲ, ಫೆ. 2: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಇದರ ಕಾರ್ಯಾಡಿ ಉರಿಮಜಲು ಶಾಖೆಯ ಪದಾಧಿಕಾರಿಗಳ ಆಯ್ಕೆ ಎಸ್ ವೈ ಎಸ್ ವಿಟ್ಲ ಸೆಂಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕಲ್ಲಡ್ಕ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಅಜ್ಜಿನಡ್ಕ, ಪ್ರ. ಕಾರ್ಯದರ್ಶಿಯಾಗಿ ಕೆ.ಬಿ.ಮಹಮ್ಮದ್ ಮುಸ್ಲಿಯಾರ್ ಕಾರ್ಯಾಡಿ, ಜತೆ ಕಾರ್ಯದರ್ಶಿ ಯಾಗಿ ಹಮೀದ್ ವಿ.ಕೆ. ಕಾರ್ಯಾಡಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಟಿ. ಕಾರ್ಯಾಡಿ ಅವರನ್ನು ಆರಿಸಲಾಯಿತು.

ಮಹಾಸಭೆಯಲ್ಲಿ ತಾಜುಲ್ ಉಲಮಾ ಜುಮಾ ಮಸೀದಿಯ ಖತೀಬ್ ಸಲೀಂ ಸಅದಿ, ಮುಅಲ್ಲಿಂ ಹೈದರಾಲಿ ಹಿಮಮಿ, ವಿಟ್ಲ ಎಸ್ ವೈ ಎಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೋಶಾಧಿಕಾರಿ ಉಸ್ಮಾನ್ ಟಿ., ಜಮಾಅತ್ ಅಧ್ಯಕ್ಷ ಕೆ.ಬಿ .ಉಸ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News