ಬಿಜೆಪಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರೇ ಇಲ್ಲ: ಅಮಿತ್ ಶಾಗೆ ತೀವ್ರ ಮುಖಭಂಗ

Update: 2019-02-06 17:25 GMT
Credits: Twitter/Mirch9

ಆಂಧ್ರ ಪ್ರದೇಶ, ಫೆ.6: ಆಂಧ್ರದ ರಾಜ್ಯ ಘಟಕವು ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ ಯಾರೊಬ್ಬರೂ ಭಾಗವಹಿಸಿಲ್ಲ ಎಂದು ವರದಿಯಾಗಿದ್ದು, ಇದರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ.

ಪಕ್ಷದ ಬಸ್ ಯಾತ್ರೆಗೆ ಪಲಾಸ ಪಟ್ಟಣದಲ್ಲಿ ಚಾಲನೆ ನೀಡುವುದಾಗಿ ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿತ್ತು. ಆದರೆ ಅಮಿತ್ ಶಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಿದಾಗ ಪಕ್ಷದ ಕೆಲ ಕಾರ್ಯಕರ್ತರನ್ನು ಹೊರತುಪಡಿಸಿ ಯಾರೊಬ್ಬರೂ ಇರಲಿಲ್ಲ ಎಂದು The Hans India ವರದಿ ಮಾಡಿದೆ.

ಇಷ್ಟೇ ಅಲ್ಲದೆ ಅಮಿತ್ ಶಾ ಆಗಮಿಸಿದಾಗ ಕಾಸಿಬುಗ್ಗಾ ಬಸ್ ನಿಲ್ದಾಣದಲ್ಲಿ ತೆಲುಗು ದೇಶಂ ಪಾರ್ಟಿಯ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಟಿಡಿಪಿ ಕಾರ್ಯಕರ್ತರ ಪ್ರತಿಭಟನೆ ಮತ್ತು ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಿ ನೆರೆದಿದ್ದ ಕೆಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅಲ್ಲಿಂದ ತೆರಳಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News