ವಾರ್ತಾಭಾರತಿ ಪ್ರಧಾನ ಕಚೇರಿಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಭೇಟಿ

Update: 2019-02-09 07:42 GMT

ಮಂಗಳೂರು, ಫೆ. 9: ಮಂಗಳೂರು ಭೇಟಿಯಲ್ಲಿದ್ದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಶುಕ್ರವಾರ ವಾರ್ತಾಭಾರತಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು. 

ಪತ್ರಿಕಾ ತಂಡದ ಜೊತೆ ಬೆರೆತ ಸಚಿವರು ವಾರ್ತಾಭಾರತಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನಾನು ಪ್ರತಿದಿನ ವಾರ್ತಾಭಾರತಿ ಪತ್ರಿಕೆಯನ್ನು ಓದುತ್ತಿದ್ದು ಅದರ ವೆಬ್ ಸೈಟ್ ನಲ್ಲಿ ಬರುವ ಸುದ್ದಿ ಅಪ್ಡೇಟ್ ಗಳನ್ನು ಮೊಬೈಲ್ ಮೂಲಕ ಆಗಾಗ ನೋಡುತ್ತಿರುತ್ತೇನೆ. ಇದರಿಂದಾಗಿ ನನಗೆ ನಿಬಿಡತೆ ಮಧ್ಯೆಯೂ ಎಲ್ಲೆಡೆಯ ಕ್ಷಣಕ್ಷಣದ ಮಾಹಿತಿ ಸಿಗುತ್ತಿರುತ್ತದೆ ಎಂದು ಹೇಳಿದರು.

ಎನ್ನಾರೈ ಉದ್ಯಮಿ ಹಿದಾಯತ್ ಅಡ್ಡೂರು, ಮಾಜಿ ಶಾಸಕ ಮೊಯ್ದಿನ್ ಬಾವ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ ಉಪಸ್ಥಿತರಿದ್ದರು.

ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹ್ಮದ್ ಆಝಾದ್ ಅವರು ವಾರ್ಷಿಕ ವಿಶೇಷಾಂಕದ ಪ್ರತಿಯನ್ನು ಸಚಿವರಿಗೆ ನೀಡಿದರು. ಬಿಸಿಸಿಐ ಯುಎಇ ಘಟಕದ ಅಧ್ಯಕ್ಷ ಎಸ್ ಎಂ ಬಶೀರ್, ಜಿ ಎ ಬಾವ, ಎಸ್ ಎಂ ಫಾರೂಕ್, ಟಿ ಎಂ ಶಹೀದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸಚಿವರನ್ನು ಸ್ವಾಗತಿಸಿ, ಪತ್ರಿಕಾ ತಂಡವನ್ನು ಪರಿಚಯಿಸಿದರು. ಮಂಗಳೂರು ಬ್ಯುರೋ ಚೀಫ್ ಬಿ ಎನ್ ಪುಷ್ಪರಾಜ್ ಸ್ಮರಣಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News