ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ ಸ್ವಲಾತ್ ಮಜ್ಲಿಸ್, ಅನುಸ್ಮರಣಾ ಸಂಗಮ

Update: 2019-02-09 18:36 GMT

ಸುಳ್ಯ,ಫೆ.9: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ಸುಳ್ಯ ಡಿವಿಶನ್ ವತಿಯಿಂದ ಸ್ವಲಾತ್ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮವು ನಾವೂರು ಗ್ರೀನ್ ವ್ಯೂ ಶಾಲೆಯ ಸಮೀಪ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. 

ಸೆಯ್ಯದ್ ಶಿಹಾಬುದ್ದೀನ್ ಅಲ್ ಐದ್ರೂಸೀ ಕಿಲ್ಲೂರ್ ತಂಙಳ್ ರವರು ದುಆಶೀರ್ವಚನ ನೀಡಿದರು. ಡಿವಿಷನ್ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಕುಂಞಕೋಯ ತಂಙಳ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಮಾಡಿದರು. 

ಕಾರ್ಯಕ್ರಮದಲ್ಲಿ ಅಬ್ದುಲ್ಲತೀಫ್ ಸಖಾಫಿ ಮಾಡನ್ನೂರು, ಅಬ್ದುಲ್ಲತೀಫ್ ಸಖಾಫಿ ಗೂನಡ್ಕ, ಉಮರ್ ಮುಸ್ಲಿಯಾರ್ ಮರ್ದಾಳ, ಝುಬೈರ್ ಸಖಾಫಿ ಗಟ್ಟಮನೆ, ಅಬೂಬಕರ್ ಹಿಮಮಿ ವಿಟ್ಲ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಆದಂ ಹಾಜಿ ಕಮ್ಮಾಡಿ, ಇಸ್ಮಾಯಿಲ್ ಹಾಜಿ, ಲತೀಫ್ ಹರ್ಲಡ್ಕ, ಹಮೀದ್ ಸುಣ್ಣಮೂಲೆ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಡಿವಿಶನ್ ಪ್ರ.ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ಸ್ವಾಗತಿಸಿ, ಫೈಝಲ್ ಝುಹ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News