ಪುಲ್ವಾಮ ಉಗ್ರ ದಾಳಿ ಹಿನ್ನೆಲೆ: ಕಪ್ಪುಪಟ್ಟ್ಟಿ ಧರಿಸಿ ಆಡಿದ ಆಟಗಾರರು

Update: 2019-02-15 17:57 GMT

ನಾಗ್ಪುರ, ಫೆ.15: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಉಗ್ರನೊಬ್ಬನ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಭಾರತದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಲ್ಲಿ ನಡೆಯುತ್ತಿರುವ ಇರಾನಿ ಕಪ್‌ನ ನಾಲ್ಕನೇ ದಿನವಾದ ಶುಕ್ರವಾರ ವಿದರ್ಭ ಹಾಗೂ ಶೇಷ ಭಾರತ ತಂಡದ ಆಟಗಾರರು ಕೈಗೆ ಕಪ್ಪುಪಟ್ಟ್ಟಿ ಧರಿಸಿ ಆಡಿದರು.

ಫೈಝ್ ಫಝಲ್ ನೇತೃತ್ವದ 2018-19ರ ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ತಂಡ ಹಾಗೂ ಅಜಿಂಕ್ಯ ರಹಾನೆ ನಾಯಕತ್ವದ ಶೇಷ ಭಾರತ ತಂಡ ಕಪ್ಪುಪಟ್ಟಿ ಧರಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಮೃತ ಯೋಧರಿಗೆ ಗೌರವ ನೀಡುವ ಸಲುವಾಗಿ ಅಂಪೈರ್‌ಗಳಾದ ನಂದನ್ ಹಾಗೂ ನಿತಿನ್ ಮೆನನ್ ಕೂಡ ತಮ್ಮ ಕೈಗೆ ಕಪ್ಪುಪಟ್ಟ್ಟಿ ಧರಿಸಿದ್ದರು. ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಸಾನಿಯಾ ಮಿರ್ಝಾ ಹಾಗೂ ವಿಜೇಂದರ್ ಸಿಂಗ್ ಸಹಿತ ಹಲವು ಭಾರತೀಯ ಕ್ರೀಡಾಳುಗಳು ಪುಲ್ವಾಮದಲ್ಲಿ ನಡೆದ ಭೀಕರ ದಾಳಿಗೆ ಟಿಟ್ಟರ್‌ನಲ್ಲಿ ಬೇಸರ ವ್ಯಕ್ತಪಡಿಸಿ ಯೋಧರ ಸಾವಿಗೆ ಆಘಾತ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News