ಫೆ.24: ಆತೂರಿನಲ್ಲಿ ಸೌಹಾರ್ದ ಸಂಗಮ, ಅನುಸ್ಮರಣೆ ಕಾರ್ಯಕ್ರಮ

Update: 2019-02-16 04:35 GMT

ಆತೂರು: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಆತೂರು ಯುನಿಟ್ ವತಿಯಿಂದ ಫೆ.24ರಂದು ಇಲ್ಲಿನ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಸೌಹಾರ್ದ ಸಂಗಮ ಹಾಗೂ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ.

 ಕಾರ್ಯಕ್ರಮದಲ್ಲಿ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಭಾಷಣ ಮಾಡುವರು. ಸೌಹಾರ್ದ ಸಂಗಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಎಸ್.ಅಂಗಾರ ಮುಂತಾದ ರಾಜಕೀಯ ಧುರೀಣರು ಭಾಗವಹಿಸುವರು.

ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಮುನೀರ್ ಸಖಾಫಿ ಉಳ್ಳಾಲ ಸೌಹಾರ್ದ ಭಾಷಣ ಮಾಡುವರು. ಅಸ್ಸೈಯದ್ ಸಾದಾತ್ ತಂಙಳ್ ಗುರುವಾಯನಕೆರೆ ದುಆಗೈಯುವರು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಆದಂ ಮದನಿ ಆತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News