ಅಕ್ರಮ ಮರಳು ಸಾಗಾಟ: ಲಾರಿಗಳ ವಶ, 30 ಲಕ್ಷ ರೂ. ಮೌಲ್ಯದ ಸೊತ್ತು ಸ್ವಾಧೀನ

Update: 2019-02-16 13:01 GMT

ಮಂಗಳೂರು, ಫೆ.16: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ಸಿಸಿಬಿ ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಫರಂಗಿಪೇಟೆಯಿಂದ ಪಡೀಲ್ ಮಾರ್ಗವಾಗಿ ಬರುತ್ತಿದ್ದ ರಹೀಂ ಮಾಲಕತ್ವದ ರಿಯಾಝ್ ಚಾಲಕನಾಗಿರುವ ಮರಳು ತುಂಬಿದ ಲಾರಿ ಮತ್ತು ರಹೀಂ ಮಾಲಕತ್ವದ ರಫೀಕ್ ಚಾಲಕನಾಗಿರುವ ಮರಳು ತುಂಬಿದ ಲಾರಿ ಹಾಗೂ ಎಂ.ಎ. ಶಮೀರ್ ಸಕಲೇಶಪುರ ಮಾಲಕ-ಚಾಲಕನಾಗಿರುವ ಮರಳನ್ನು ಖಾಲಿ ಮಾಡಿ ಬರುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ವಾಧೀನಪಡಿಸಿಕೊಂಡ ಮರಳು ಮತ್ತು ಲಾರಿಯ ಮೌಲ್ಯ ಒಟ್ಟು 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮುಂದಿನ ಸೂಕ್ತ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News