ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಲ್ಲ: ರಜಿನಿಕಾಂತ್

Update: 2019-02-17 19:19 GMT

ಹೊಸದಿಲ್ಲಿ, ಫೆ.17: ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಮತ್ತು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ರಾಜಕೀಯ ಪ್ರವೇಶಿಸಿರುವ ಖ್ಯಾತ ನಟ ರಜನೀಕಾಂತ್ ಹೇಳಿದ್ದಾರೆ.

  ತಾನು ಯಾರನ್ನೂ ಬೆಂಬಲಿಸುವುದಿಲ್ಲ. ಯಾವುದೇ ಪಕ್ಷ ತನ್ನ ಫೋಟೋ ಅಥವಾ ತನ್ನ ರಜಿನಿ ಮಕ್ಕಳ ಮಂದರಮ್ ಪಕ್ಷದ ಲಾಂಛನವನ್ನು ಪ್ರಚಾರದ ಸಂದರ್ಭ ಬಳಸಬಾರದು ಎಂದವರು ಸ್ಪಷ್ಟಪಡಿಸಿದ್ದಾರೆ.

ಬಲಿಷ್ಟ ಸರಕಾರವನ್ನು ರಚಿಸಬಲ್ಲ ಮತ್ತು ತಮಿಳುನಾಡು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವ ಪಕ್ಷಕ್ಕೆ ಮತ ಚಲಾಯಿಸುವಂತೆ ಅವರು ಜನತೆಗೆ ಕರೆ ನೀಡಿದ್ದಾರೆ. 2017ರ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ತನ್ನ ಪಕ್ಷದ ಘೋಷಣೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ್ದರು ರಜನೀಕಾಂತ್. ಅವರ ಪಕ್ಷ ತಮಿಳುನಾಡಿನಲ್ಲಿ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಬಗ್ಗೆ ಮೂಡಿದ್ದ ಊಹಾಪೋಹಕ್ಕೆ ಈಗ ರಜನೀಕಾಂತ್ ತೆರೆ ಎಳೆದಿದ್ದಾರೆ.

ರಾಜಕೀಯ ಪ್ರವೇಶಿಸಿರುವ ಮತ್ತೊಬ್ಬ ಖ್ಯಾತ ನಟ ಕಮಲಹಾಸನ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಲಿದೆ ಎಂದು ಈಗಾಗಲೇ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News