"ಮೋದಿಯವರೇ, ಇನ್ನೊಂದು ಗೋಧ್ರಾ ಹತ್ಯಾಕಾಂಡ ಮಾಡಿಸಿ" ಎಂದ ಸಾಧ್ವಿ ಪ್ರಾಚಿ!
ಹೊಸದಿಲ್ಲಿ, ಫೆ.18: ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ‘ಗೋಧ್ರಾ ಹತ್ಯಾಕಾಂಡ’ವನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಸಂಘಪರಿವಾರದ ನಾಯಕಿ ಸಾಧ್ವಿ ಪ್ರಾಚಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಪುಲ್ವಾಮ ದಾಳಿಯ ಬಗ್ಗೆ ಸಾಧ್ವಿಯನ್ನು ಪತ್ರಕರ್ತರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಾಕಿಸ್ತಾನಕ್ಕೆ ಪಾಠ ಕಲಿಸಲು ಮೋದಿ ಮತ್ತೊಂದು ಗೋಧ್ರಾ ಹತ್ಯಾಕಾಂಡ’ ನಡೆಸಬೇಕು ಎಂದಿದ್ದಾರೆ…!.
ಸಾಧ್ವಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ನಾನು ಪ್ರಧಾನಮಂತ್ರಿಯವರಲ್ಲಿ ಕೈಮುಗಿದು ವಿನಂತಿಸುತ್ತಿದ್ದೇನೆ. ಪಾಕಿಸ್ತಾನದ ವಿರುದ್ಧ ನೀವು ಗೋಧ್ರಾ ಹತ್ಯಾಕಾಂಡದಂತೆ ಮತ್ತೊಂದು ಹತ್ಯಾಕಾಂಡ ಮಾಡಿಸಿದರೆ ಇಡೀ ದೇಶವೇ ನಿಮಗೆ ತಲೆಬಾಗುತ್ತದೆ. ರಾವಲ್ಪಿಂಡಿ ಮತ್ತು ಕರಾಚಿಯನ್ನು ನಾವು ಸುಟ್ಟು ಹಾಕುವವರೆಗೆ ಭಯೋತ್ಪಾದನೆ ಕೊನೆಯಾಗುವುದಿಲ್ಲ” ಎಂದವರು ಹೇಳಿದರು.
ಸಾಧ್ವಿ ಪ್ರಾಚಿಯ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ವೈರಲ್ ಆಗಿದೆ. ‘2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೋದಿ ಪಾತ್ರವಿದೆ ಎಂದು ಪ್ರಾಚಿ ಹೇಳಿದ್ದಾರೆಯೇ?” ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿದ್ದಾರೆ.
“ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ 2 ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ.
1.ಚುನಾವಣೆ ಹತ್ತಿರದಲ್ಲಿರುವಂತೆ ಭಾರತದ ಉತ್ತರ ಪಶ್ಚಿಮ ಗಡಿಯಲ್ಲಿ ಮೋದಿ ಸರಕಾರ ಏನೋ ನಾಟಕ ಮಾಡಲಿದೆ.
2.ಗೋಧ್ರಾ ಹತ್ಯಾಕಾಂಡವನ್ನು ನಡೆಸಿದವರು ಯಾರು ಎಂಬುದನ್ನು ಆಕೆ ಹೇಳಿದ್ದಾರೆ” ಎಂದು ಪತ್ರಕರ್ತ ರವಿ ನಾಯರ್ ಟ್ವೀಟ್ ಮಾಡಿದ್ದಾರೆ.
“ಆ ಮಹಿಳೆ ಮೂರ್ಖಳಾಗಿರಬಹುದು ಆದರೆ ಆಕೆ ಹೇಳಿದ್ದು ಸತ್ಯ, ಮೋದಿಯ ನೇರ ವಿರುದ್ಧ” ಎಂದು ನಮೋ ಪಕೋಡೆವಾಲಾ ಎನ್ನುವ ಖಾತೆ ಟ್ವೀಟ್ ಮಾಡಿದೆ.
ಕಾಶಿಫ್ ಜವೈದ್ ಎಂಬವರು ಟ್ವೀಟ್ ಮಾಡಿ, “ಗೋಧ್ರಾ ದುರಂತದ ಹಿಂದಿರುವವರು ಯಾರು ಎನ್ನುವುದು ಈಗ ಸ್ಪಷ್ಟವಾಗಿದೆ?, ಸಂಚುಕೋರರು ಯಾರು?, ಬಿಜೆಪಿಗೆ ನಾಚಿಕೆಯಾಗಬೇಕು! ಆರೆಸ್ಸೆಸ್ ಗೆ ನಾಚಿಕೆಯಾಗಬೇಕು! ಮೋದಿಗೆ ನಾಚಿಕೆಯಾಗಬೇಕು !” ಎಂದಿದ್ದಾರೆ.
BJP leader Sadhvi Prachi made two things clear:
— Ravi Nair (@t_d_h_nair) February 18, 2019
A) Modi govt will do some drama in the north western border of India in the run up to election.
B) She said in open who orchestrated Godhra carnage
pic.twitter.com/uNm4qDc35f
"Ek Baar Godhra kaand karaado Pakistan mein"
— NaMo-PakodewalaRafaleWalaNiravModiWalaKotlerफकीर (@RSR1090) February 18, 2019
The lady may be foolish but is Truthful, the exact opposite of Modi.
Now this has become clear Who is behind Godhra tragedy ? Who is the Conspirator ? Shame on BJP ! Shame on RSS ! Shame on Modi !
— Kashif Jawaid (@Kashif_Jawaid86) February 18, 2019
It's time for India to rethink the political quality of our nation.
— Rahul Vicky (@RahulVicky) February 18, 2019
Can India afford such callous and crass representatives in our politics who have almost zero knowledge in everything? No wonder whenever they open their mouth they embarrass the nation, each and every time.