ಸಂಸದರ ಆದರ್ಶ ಗ್ರಾಮ ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

Update: 2019-02-19 13:20 GMT

ಉಡುಪಿ, ಫೆ.19: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕಾಡೂರು- ನಡೂರು ಗ್ರಾಮಗಳಲ್ಲಿ ಹಲವು ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಇವುಗಳಿಗೆ ನಾಳೆ ಚಾಲನೆ ನೀಡಲಾಗುತ್ತದೆ ಕಾಡೂರು ಗ್ರಾಪಂನ ಪ್ರಕಟಣೆ ತಿಳಿಸಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಬಹು ಆಯಾಮದ ಅಭಿವೃದ್ಧಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ಮಾರ್ಗದರ್ಶನದಂತೆ ಹಮ್ಮಿಕೊಳ್ಳಲಾಗಿರುವ ನಗದು ರಹಿತ ವರ್ಗಾವಣೆಗೆ ಚಾಲನೆ ಮತ್ತು ಪ್ರಾತ್ಯಕ್ಷಿಕೆ, ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ಉದ್ಘಾಟನೆ, ಮಹಿಳಾ ಗ್ರಾಮಸಭೆ, ಮಹಿಳಾ ಆರೋಗ್ಯ ಅವಕಾಶಗಳ ಚಿಂತನೆ -ಅವಲೋಕನ ಸೌಲ್ಯಗಳ ಮಾಹಿತಿ, ದ್ವಿತೀಯ ಗ್ರಾಮಸಭೆ, ಇಲಾಖಾವಾರು ಸೌಲ್ಯ ಮಾಹಿತಿ, ಸ್ವಚ್ಛತೆ-ಆರೋಗ್ಯ ಕುರಿತು ಮಾಹಿತಿ, ಫಲಾನು ಭವಿಗಳಿಗೆ ಸೌಲಭ್ಯ ವಿತರಣೆ, ಮತದಾನ ಜಾಗೃತಿ ಮಾಹಿತಿ ಹಾಗೂ ಪ್ರಗತಿಯ ವೌಲ್ಯ ಮಾಪನ ಕಾರ್ಯಕ್ರಮಗಳು ನಾಳೆ ನಡೆಯಲಿದೆ.

ಬುಧವಾರ ಅಪರಾಹ್ನ 2 ಗಂಟೆಗೆ ನಡೂರು ರಜತಾದ್ರಿಯ ಶ್ರೀವಾಣಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾಡೂರು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News