ಪೆರಿಯದಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಖಂಡನೀಯ: ಪಿಣರಾಯಿ ವಿಜಯನ್

Update: 2019-02-22 13:14 GMT

ಕಾಸರಗೋಡು, ಫೆ. 22: ಪೆರಿಯದಲ್ಲಿ ಎರಡು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಖಂಡನೀಯ. ಈ ಕೃತ್ಯವನ್ನು ಯಾವುದೇ  ರೀತಿಯಲ್ಲಿ  ಸಮರ್ಥಿ ಸಲಾಗದು ಎಂದು ಕೇರಳ  ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಹೇಳಿದರು. 

ಅವರು  ಕಾಸರಗೋಡು ನಗರ ಹೊರವಲಯದ  ವಿದ್ಯಾನಗರದಲ್ಲಿ  ಸಿಪಿಎಂ  ಜಿಲ್ಲಾ  ಸಮಿತಿಯ  ನೂತನ  ಕಚೇರಿಗೆ ಶಿಲಾನ್ಯಾಸ ನೆರವೇರಿಸಿ  ಮಾತನಾಡುತ್ತಿದ್ದರು .

ಆರೋಪಿಗಳು  ಯಾವುದೇ  ಪಕ್ಷದವರಾಗಿದ್ದರೂ  ಕಠಿಣ  ಕ್ರಮ ತೆಗೆದುಕೊಳ್ಳಲಾಗುವುದು .  ಕಾನೂನು  ಕಾನೂನು ರೀತಿಯಲ್ಲಿ  ಸಾಗಲಿದೆ. ತನಿಖೆಯಲ್ಲಿ  ಸರಕಾರ ಯಾವುದೇ  ಹಸ್ತಕ್ಷೇಪ  ನಡೆಸದು.  ಪಕ್ಷದ ನಿಲುವೇನೆಂಬುದನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕೃತ್ಯದ  ಬಳಿಕ  ಪರಿಸರದಲ್ಲಿ  ಕಾಂಗ್ರೆಸ್  ಸಿಪಿಎಂ ಪಕ್ಷದ  ಕಚೇರಿ, ಕಾರ್ಯಕರ್ತರ ಮನೆಗಳಿಗೆ ಹಾನಿಗೊಳಿಸಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು .

ಸಂಸದ ಪಿ . ಕರುಣಾಕರನ್  ಅಧ್ಯಕ್ಷತೆ ವಹಿಸಿದ್ದರು.   ಜಿಲ್ಲಾ ಕಾರ್ಯದರ್ಶಿ ಎಂ .ವಿ ಬಾಲಕೃಷ್ಣನ್ , ಶಾಸಕರಾದ ಕೆ . ಕು೦ಞ ರಾಮನ್  ,  ಎಂ . ರಾಜಗೋಪಾಲ್ , ಕೆ .ಪಿ  ಸತೀಶ್ಚಂದ್ರನ್ ,  ಸಿ . ಎಚ್ ಕುಞ೦ಬು ,  ಕೆ . ಆರ್  ಜಯಾನಂದ, ಪಿ . ಜನಾರ್ದನ, ವಿಪಿಪಿ ಮುಸ್ತಾಫಾ , ಕೆ.ವಿ ಕುಂಞಿ ರಾಮನ್, ಸಾಬು ಅಬ್ರಹಾಂ, ಎ.ಕೆ. ನಾರಾಯಣನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News