ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಗಳಿಬ್ಬರ ಮಧ್ಯೆ ಜಗಳ; ಓರ್ವನ ಹತ್ಯೆ

Update: 2019-03-03 07:21 GMT

ಉಪ್ಪಿನಂಗಡಿ, ಮಾ. 3: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಗಳಿಬ್ಬರ ಮಧ್ಯೆ ಜಗಳ ನಡೆದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ರವಿವಾರ ಬೆಳಗ್ಗೆ ಕೂಟೇಲು ಬಳಿ ನಡೆದಿದೆ. 

ಕರಾಯ ಗ್ರಾಮದ ಕಲ್ಲಾಪು ಮನೆ ನಿವಾಸಿ ಮೋನಪ್ಪ ಎಂಬವರ ಪುತ್ರ ಯಶವಂತ  (19) ಮೃತ ಯುವಕ ಎಂದು ಗುರುತಿಸಲಾಗಿದೆ.

ಈತನ ಹೊಟ್ಟೆಗೆ ಸಂಬಂಧಿ, ವಗ್ಗದ ಆನಂದ ಎಂಬಾತ ಇರಿದಿದ್ದು, ಗಂಭೀರ ಗಾಯಗೊಂಡ ಯಶವಂತ ರಾಷ್ಟ್ರೀಯ ಹೆದ್ದಾರಿ ಬಳಿ ಬಿದ್ದಿದ್ದು, ರಿಕ್ಷಾ ಚಾಲಕ ಫಾರೂಕ್ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರತಾಪ್ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಯಶವಂತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News