ಮದೀನಾ ಡಿ.ಕೆ.ಎಸ್.ಸಿ. ವಾರ್ಷಿಕ ಮಹಾಸಭೆ

Update: 2019-03-03 08:21 GMT

ಮದೀನಾ, ಮಾ. 3:  ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ) ಮದೀನಾ ಘಟಕದ ಮಹಾಸಭೆ ಮದೀನಾದ ಹವಾಲಿಯಲ್ಲಿ ನಡೆಯಿತು.

ಸಭಾಧ್ಯಕ್ಷರಾದ ಶರೀಫ್ ಮರವೂರು ಮಾತನಾಡಿ, ಡಿ.ಕೆ.ಎಸ್.ಸಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಶ್ರಫ್ ಸಖಾಫಿ ನೂಜಿ ಕಿರಾಅತ್ ಪಠಿಸಿದರು. ಹೈದರ್ ಜಾರಿಗೆಬೈಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಇಕ್ಬಾಲ್ ಕುಪ್ಪೆಪದವು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ಹಳೆಯ ಸಮಿತಿ ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಉಚ್ಚಿಲ, ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಅಳಕೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕುಪ್ಪೆಪದವು, ಕೋಶಧಿಕಾರಿ ಮಹಮ್ಮದ್ ಅಲಿ ಪಾಣೆಮಂಗಳೂರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸುಲೈಮಾನ್ ಮಿತರಿಪಾದೆ ಮತ್ತು ಅಶ್ರಫ್ ಕಿನ್ಯ, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಬದಿಯಾರ್ ಮತ್ತು ಶರೀಫ್ ಮಠ, ಸಂಚಾಲಕರಾಗಿ ಇರ್ಷಾದ್ ಜೋಕಟ್ಟೆ, ಇಸ್ಮಾಯಿಲ್ ಪುತ್ತೂರು ಅಲ್ಮರೈ, ಎಲ್ ಇಕ್ಬಾಲ್ ಕುಪ್ಪೆಪದವು, ಜುನೈದ್ ಉಳ್ಳಾಲ, ವಲಯ ಸಮಿತಿ ಸದಸ್ಯರಾಗಿ ತಾಜುದ್ದೀನ್ ಸುಳ್ಯ, ಅಹ್ಮದ್ ಶರೀಫ್ ಮರವೂರ್, ಇಕ್ಬಾಲ್ ಕುಪ್ಪೆಪದವು, ಮುಹಮ್ಮದ್ ಅಲಿ ಪಾಣೆಮಂಗಳೂರು, ಅಬ್ದುಲ್ ರಝಾಕ್ ಅಳಕೆಮಜಲು, ಮನ್ಸೂರ್ ಅಹ್ಮದ್ ಉಚ್ಚಿಲ, ಸ್ವಲಾತ್ ನೇತೃತ್ವ ಅಶ್ರಫ್ ಸಖಾಫಿ ನೂಜಿ, ಸಂಘಟನಾ ಕಾರ್ಯದರ್ಶಿಯಾಗಿ ಅಹ್ಮದ್ ಶರೀಫ್ ಮರವೂರ್ ಇವರನ್ನು ಆಯ್ಕೆಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಮರವೂರ್, ಸಲಾಂ ಬಾಯಾರ್, ರಿಝ್ವಾನ್ ಫರಂಗಿಪೇಟೆ, ರಫೀಕ್ ಪಾಣೆಮಂಗಳೂರು, ಮುಸ್ತಾಕ್ ಕುಪ್ಪೆಪದವು, ಇಲ್ಯಾಸ್ ಕುಪ್ಪೆಪದವು, ಸುಲೈಮಾನ್ ತುರ್ಕಲಿಕೆ, ಮುಸ್ತಫಾ ಉಪ್ಪಳ, ಅಶ್ರಫ್ ನ್ಯಾಷನಲ್, ಬದ್ರುದ್ದೀನ್ ಕಬಕ, ಸಲೀಂ ಕಬಕ, ಅಬ್ದುಲ್ ಅಝೀಝ್ ಸುರಿಬೈಲ್, ಸಿರಾಜ್ ಅಮ್ಮುಂಜೆ ಮತ್ತು ಆದಂ ಸೋಫಾ ಆಯ್ಕೆಯಾದರು.

ಮಕ್ಕಾ ವಲಯ ಕಾರ್ಯದರ್ಶಿ ಇಬ್ರಾಹೀಂ ಕನ್ನಂಗಾರ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು. ಶರೀಫ್ ಮರವೂರು ಸ್ವಾಗತಿಸಿ, ಇಕ್ಬಾಲ್ ಕುಪ್ಪೆಪದವು ದನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News