ಲಜಿನತುಲ್ ಅನ್ಸಾರಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ಕೃಷ್ಣಾಪುರ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-03-03 16:55 GMT

ಸುರತ್ಕಲ್, ಮಾ. 3: ಲಜಿನತುಲ್ ಅನ್ಸಾರಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ಕೃಷ್ಣಾಪುರ ಇದರ 23ನೇ ವಾರ್ಷಿಕೋತ್ಸವ ಹಾಗೂ 18ನೇ ರಿಫಾಯಿಯಾ ದಫ್ ರಾತೀಬ್ ಪ್ರಯುಕ್ತ ಸಾಮೂಹಿಕ ವಿವಾಹ ಸಮಾರಂಭವು ರವಿವಾರ ಕೃಷ್ಣಾಪುರ ಈದ್ಗಾ ಜುಮಾ ಮಸ್ಜಿದ್‌ನ ವಠಾರದಲ್ಲಿ ನಡೆಯಿತು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾರತದ ಗ್ರಾಂಡ್‌ ಮುಫ್ತಿ ಕಾಂತಾಪುರ ಎಪಿ ಅಬೂಬಕರ್ ಮುಸ್ಲಿಯಾರ್ ನಿಖಾಹ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ಮಮ್ತಾಝ್‌ ಅಲಿ ವಹಿಸಿದ್ದರು. ಕೃಷ್ಣಾಪುರ ಖಾಝಿ ಎ.ಕೆ. ಇಬ್ರಾಹೀಂ ಮದನಿ, ಲಜಿನತುಲ್ ಅನ್ಸಾರಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಝಾಕೀರ್ ಹುಸೈನ್, ಮಂಗಳೂರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಖಾನ್, ಮಂಗಳೂರು ನಗರ ಪಾಲಿಕೆ ಆಯುಕ್ತ ನಝೀರ್, ಮಾಜಿ ಶಾಸಕ ಮೊಯ್ದಿನ್ ಬಾವ, ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News