ಶಿವರಾತ್ರಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿರುವವರ ವಿರುದ್ಧ ಸೂಕ್ತ ಕ್ರಮ: ಸಚಿವ ಯು.ಟಿ.ಖಾದರ್

Update: 2019-03-05 14:59 GMT

ಮಂಗಳೂರು,ಮಾ.5: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಶಿವರಾತ್ರಿ ಆಚರಣೆ ಯಾವುದೇ ಸಮಸ್ಯೆ, ಯಾರಿಗೂ ತೊಂದರೆಯಾಗದಂತೆ ನಡೆದಿರುವಾಗ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಎರಡು ಕಡೆ ಪೊಲೀಸರು ಏಕೆ ತಡೆಯೊಡ್ಡಿದ್ದಾರೆ? ಅವರಿಗೆ ಆದೇಶ ನೀಡಿದ ಮೇಲಾಧಿಕಾರಿ ಯಾರು? ಈ ಎಲ್ಲಾ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸಲು ಮಂಗಳೂರು ಪೊಲೀಸ್ ಕಮೀಶನರ್‌ಗೆ ಆದೇಶ ನೀಡಿದ್ದೇನೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜಿಲ್ಲೆಯ ಸಾಂಸ್ಕೃತಿಕ ಹಿನ್ನೆಲೆ ಆಚರಣೆಗಳನ್ನು ತಿಳಿದುಕೊಂಡಿರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಕಾನೂನು ಪಾಲನೆ ಮಾಡಬೇಕಾದ ಹೊಣೆಗಾರಿಕೆ ಇದೆ. ಶಿವರಾತ್ರಿಯ ದಿನ ರಾತ್ರಿ ಘಟನೆ ನಡೆದ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರು ವಿಷಯವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಆ ಸಂದರ್ಭದಲ್ಲಿ ಐಜಿಪಿಗೆ ಪೋನ್ ಮಾಡಿ ಶಿವರಾತ್ರಿ ಕಾರ್ಯಕ್ರಮಕ್ಕೆ ಯಾವುದೇ ತಡೆ ಮಾಡಬೇಡಿ ಎಂದು ತಿಳಿಸಿರುವುದಾಗಿ ಸಚಿವ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News