ಆಕಾಶವಾಣಿಯ ‘ಸ್ವರಮಂಟಮೆ’ಯ ರಜತಸಂಭ್ರಮ
Update: 2019-03-05 17:59 GMT
ಮಂಗಳೂರು, ಮಾ.5: ತುಳು ಭಾಷೆ,ಸಂಸ್ಕೃತಿಯ ಬೆಳವಣಿಗೆಗೆ ಆಂತರಿಕ ಮತ್ತು ಬಾಹ್ಯ ಶಕ್ತಿ ಸಂವರ್ಧನೆ ಅತ್ಯಗತ್ಯ. ಈ ನೆಲೆಯಲ್ಲಿ ಆಕಾಶವಾಣಿಯು ಆಂತರಿಕ ಶಕ್ತಿ ತುಂಬಿಸುವ ಉತ್ತಮ ಕಾರ್ಯಕ್ರಮಗಳನ್ನು ಬಿತ್ತರಿಸಿ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಒಡಿಯೂರು ಶ್ರೀಗುರುದೇವ ಸಂಸ್ಥಾನ ಮಠದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ ‘ಸ್ವರಮಂಟಮೆ’ ನೇರಪ್ರಸಾರದ ‘ರಜತ ಸಂಭ್ರಮ’ವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿದರು. ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಅಧ್ಯಕ್ಷತೆ ವಹಿಸಿದ್ದರು.
ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಸ್ವಾಗತಿಸಿದರು. ಲೇಖಕಿ ಪಲ್ಲವಿ ಪ್ರಸಾಂತ್ ನರಿಕೊಂಬು ಉಪಸ್ಥಿತರಿದ್ದರು.