ಸತ್ತ ಸೊಳ್ಳೆಗಳನ್ನು ನಾನು ಲೆಕ್ಕ ಹಾಕಬೇಕೇ ?: ವಿ.ಕೆ. ಸಿಂಗ್

Update: 2019-03-06 17:17 GMT

ಹೊಸದಿಲ್ಲಿ, ಮಾ. 6: ಭಾರತೀಯ ವಾಯು ಪಡೆ ಬಾಲಕೋಟ್‌ನ ಮೇಲೆ ನಡೆಸಿದ ದಾಳಿಯಲ್ಲಿ 300 ಉಗ್ರರು ಹತರಾಗಿರುವುದಕ್ಕೆ ಪುರಾವೆ ನೀಡುವಂತೆ ಆಗ್ರಹಿಸಿರುವ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸಚಿವ ವಿ.ಕೆ. ಸಿಂಗ್, ಸೊಳ್ಳೆಗಳನ್ನು ನಾನು ಲೆಕ್ಕ ಹಾಕಬೇಕೇ ಎಂದು ಪ್ರಶ್ನಿಸಿದ್ದಾರೆ.

‘‘ಸುಮಾರು ಬೆಳಗ್ಗೆ 3.30ಕ್ಕೆ ಅಲ್ಲಿ ಸಾಕಷ್ಟು ಸೊಳ್ಳೆಗಳು ಇದ್ದುವು. ನಾನು ಹಿಟ್ ಸಿಂಪಡಿಸಿದೆ. ಈಗ ನಾನು ಕುಳಿತು ಎಷ್ಟು ಸೊಳ್ಳೆಗಳು ಸತ್ತಿವೆ ಎಂದು ಲೆಕ್ಕ ಹಾಕಬೇಕೇ ? ಅಥವಾ ಹಿಂದಿರುಗಿ ಮಲಗಬೇಕೇ ?’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಾಲಕೋಟ್ ಮೇಲೆ ನಡೆಸಿದ ದಾಳಿಯಲ್ಲಿ ಹತರಾದ ಉಗ್ರರ ಅಧಿಕೃತ ಸಂಖ್ಯೆಯನ್ನು ಸಲ್ಲಿಸದೇ ಇರುವ ಬಗ್ಗೆ ಪ್ರತಿಪಕ್ಷ ಸರಕಾರವನ್ನು ಕಟುವಾಗಿ ಟೀಕಿಸುತ್ತಿದೆ. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ, ಅದು ಸಂಖ್ಯೆ ಎಂದು ಹೇಳುವ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹತ ಉಗ್ರ ಸಂಖ್ಯೆಯನ್ನು ದೃಢಪಡಿಸಲು ಮಂಗಳವಾರ ನಿರಾಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News