ಮಹಾರಾಷ್ಟ್ರ ಕಾಂಗ್ರೆಸ್ ನಾಯಕನ ಪುತ್ರ ಬಿಜೆಪಿಗೆ: ಕೈ ಪಕ್ಷಕ್ಕೆ ಭಾರೀ ಹಿನ್ನಡೆ

Update: 2019-03-12 12:46 GMT

ಮುಂಬೈ, ಮಾ.12: ಮಹಾರಾಷ್ಟ್ರದ ವಿಪಕ್ಷ ನಾಯಕನ ಪುತ್ರ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಮೂಲಕ ಲೋಕಸಭಾ ಚುನಾವಣೆಗೆ ಮೊದಲ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ.

ಸುಜಯ್ ವಿಖೆ ಪಾಟೀಲ್‌ರನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹಿತ  ಇತರ ನಾಯಕರು ಬಿಜೆಪಿಗೆ ಸ್ವಾಗತಿಸಿದ್ದಾರೆ. ಸುಜಯ್ ಕಾಂಗ್ರೆಸ್‌ನ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್‌ರ ಪುತ್ರನಾಗಿದ್ದು ಅಹ್ಮದ್‌ನಗರ ಲೋಕಸಭಾ ಚುನಾವಣೆಗೆ ಸೀಟು ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದರು. ಈ ಕ್ಷೇತ್ರದಲ್ಲಿ ವಿಖೆ ಪಾಟೀಲ್ ಕುಟುಂಬ ಬಿಗಿಹಿಡಿತ ಹೊಂದಿದೆ. ಈ ಕ್ಷೇತ್ರವನ್ನು ಎನ್‌ಸಿಪಿ ತನಗೆ ಬೇಕೆಂದು ಹಠ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News