ಏಕಕಾಲದಲ್ಲಿ ಸಕ್ರಿಯ ರೌಡಿಗಳ ಮೇಲೆ ಪೊಲೀಸ್ ದಾಳಿ; ಮೂವರ ಬಂಧನ; ಸ್ಕಾರ್ಪಿಯೊ, ಎರಡು ತಲವಾರು ವಶ

Update: 2019-03-14 07:18 GMT

ಮಂಗಳೂರು, ಮಾ.14: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಕ್ರಿಯ ರೌಡಿಗಳ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಗುರುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ, ಸ್ಕಾರ್ಪಿಯೊ ಸಹಿತ ಎರಡು ತಲವಾರು ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೋಜ್ ಹಾಗೂ ಚೇತನ್ ಎಂಬವರನ್ನು ಬಂಧಿಸಿ ಅವರಿಂದ ದಾಖಲೆ ರಹಿತ ಸ್ಕಾರ್ಪಿಯೋ ಹಾಗೂ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಇಮ್ರಾನ್‌ನನ್ನು ಬಂಧಿಸಿ ಆತನಿಂದ ಎರಡು ತಲವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News