ಮಾ.16: ಲಲಿತಕಲಾ ಪ್ರಶಸ್ತಿ ಪ್ರದಾನ

Update: 2019-03-14 12:28 GMT

ಕಾರ್ಕಳ, ಮಾ.14 ಶ್ರೀದೇವಿ ಲಲಿತ ಕಲಾವೃಂದದ 2018 ಮತ್ತು 2019ರ ಲಲಿತ ಕಲಾ ಪ್ರಶಸ್ತಿಯು ಕಲಾವಿದ ಬೇಳಂಜೆ ಸುಂದರ ನಾಯ್ಕ್ ಮತ್ತು ಪ್ರಸಾದನ ವಿಭಾಗದ ದಯಾನಂದ ರಾವ್‌ಗೆ ಲಭಿಸಿದೆ. ಮಾ.16ರಂದು ರಾತ್ರಿ 9:30ಕ್ಕೆ ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಲಿತಕಲಾ ವೃಂದದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಕಾರ್ಕಳ ತಿಳಿಸಿದ್ದಾರೆ.

ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ.ಕಿಶನ್ ಹೆಗ್ಡೆ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಕೀಲರಾದ ಎಂ.ಕೆ.ವಿಜಯಕುಮಾರ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ ಭಾಗವಹಿಸುವರು. ಬಳಿಕ ಸಾಲಿಗ್ರಾಮ ಮೇಳದವರಿಂದ ಸತ್ಯವಾನ್ ಸಾವಿತ್ರಿ ಮತ್ತು ತುಳಸಿ ಜಲಂಧರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News