ಶಂಸುಲ್ ಉಲಮಾ ಯೂತ್ ವಿಂಗ್ ಪಕ್ಕಲಡ್ಕದಿಂದ ರಕ್ತದಾನ ಶಿಬಿರ

Update: 2019-03-14 16:09 GMT

ಮಂಗಳೂರು, ಮಾ.14: ಶಂಸುಲ್ ಯಾತ್ ವಿಂಗ್ ಪಕ್ಕಲಡ್ಕ ಹಾಗೂ ಮುಹ್ಯುದ್ದೀನ್ ಜುಮ್ಮಾ ಮಸೀದಿ ಪಕ್ಕಲಡ್ಕ ಇದರ ಆಶ್ರಯದಲ್ಲಿ ಕೆಎಂಸಿ ಮಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಪಕ್ಕಲಡ್ಕ ಮದರಸದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಯೂತ್ ವಿಂಗ್ ಅಧ್ಯಕ್ಷ ಬಶೀರ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬರಾದ ನಝೀರ್ ಅಝ್ಹರಿ ಸಭೆಯನ್ನು ಉದ್ಘಾಟಿಸಿದರು. ಕೆಎಂಸಿ ವೈದ್ಯ ಡಾ.ರಾಘವೇಂದ್ರ ರಕ್ತದಾನದ ಬಗ್ಗೆ ಉಪನ್ಯಾಸ ನೀಡಿದರು. ಸ್ಥಳೀಯ ಮದರಸ ಮುಖ್ಯ ಅಧ್ಯಾಪಕ ಅನ್ವರ್ ಅಝ್ಹರಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯೂತ್ ವಿಂಗ್ ಕಾರ್ಯದರ್ಶಿ ರಿಯಾಝ್ ಪೈಂಟರ್, ಶರೀಫ್ ಶಾಫಿ, ಜಮಾಅತ್ ಉಪಾಧ್ಯಕ್ಷ ಶರೀಫ್, ಕಾರ್ಯದರ್ಶಿ ಹಬೀಬ್, ಕೋಶಾಧಿಕಾರಿ ಝುಬೈರ್, ಮದರಸ ಸಮಿತಿಯ ನಿಯಾಝ್, ಯೂತ್ ವಿಂಗ್‌ನ ಸುಹೈಲ್, ಸಮೀರ್ ಗುಡ್ಡೆ, ಬಶೀರ್, ಸಾದಿಕ್, ಅಶ್ರಫ್ ಹೊಟೇಲ್, ಮದರಸ ಅಧ್ಯಾಪಕರಾದ ಹಾರಿಸ್ ಅಶ್ರಫಿ, ಮುಹ್ಯುದ್ದೀನ್ ಮುಸ್ಲಿಯಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News