ಮಾ.16: ಮಂಗಳೂರಿನಲ್ಲಿ ಸಾದಾತ್ ಸಂಗಮ

Update: 2019-03-14 16:17 GMT

ಮಂಗಳೂರು, ಮಾ.16: ಪ್ರವಾದಿಯವರ ಪವಿತ್ರ ಕುಟುಂಬ ಪರಂಪರೆಗೆ ಸೇರಿದ ಸೈಯದ್‌ಗಳನ್ನು ರಾಜ್ಯದಲ್ಲಿ ಒಗ್ಗೂಡಿಸಲು ಮಾ.16ರಂದು ಬೆಳಗ್ಗೆ 10 ಗಂಟೆಗೆ ನಗರದ ಸೂರ್ಯ ಹೋಟೆಲ್‌ನಲ್ಲಿ ಸಾದಾತ್ ಸಂಗಮವನ್ನು ಆಯೋಜಿಸಲಾಗಿದೆ.

ರಾಜ್ಯದಲ್ಲಿರುವ ಎಲ್ಲ ಅಹ್ಲುಬೈತ್ ಖಬೀಲಗಳಿಗೆ ಸೇರಿದ ಸೈಯದ್‌ಗಳು ಪ್ರಸ್ತುತ ಸಂಗಮದಲ್ಲಿ ಭಾಗವಹಿಸುವಂತೆ ಸಂಯೋಜನಾ ಸಮಿತಿ ಸದಸ್ಯ ಸೈಯದ್ ಎಪಿಎಸ್ ತಂಙಳ್ ಉಪ್ಪಳ್ಳಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 94481 64682ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News