ಕಾಪುವಿನಲ್ಲಿ ಮತದಾನ ಜಾಗೃತಿ

Update: 2019-03-14 16:24 GMT

ಕಾಪು: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಪು ಪುರಸಭೆಯಲ್ಲಿ ಗುರುವಾರ ಮತದಾನ ಜಾಗೃತಿ ನಡೆಯಿತು.

ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ನಡೆದ ಈ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತದಾನದ ಮಹತ್ವದ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಬಳಿಕ ವಿವಿ ಪ್ಯಾಟ್ ಮುಖಾಂತರ ಅಣಕು ಮತದಾನದ ಬಗ್ಗೆ ಪ್ರದರ್ಶಿಸಲಾಯಿತು. 

ಅಂಗವಿಕಲರ ಪುನರ್ವಸತಿ ಕೇಂದ್ರ ಉಡುಪಿ ಇದರ ಸಂಯೋಜಕ ಮಧುಸೂದನ ರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News