ತಂಡದಿಂದ ಹಲ್ಲೆ: ದೂರು
Update: 2019-03-17 10:28 GMT
ಕುಂದಾಪುರ, ಮಾ.17: ತಂಡವೊಂದು ಮನೆಗೆ ನುಗ್ಗಿ ಮಹಿಳೆ ಸಹಿತ ಮೂವರಿಗೆ ಹಲ್ಲೆ ನಡೆಸಿರುವ ಘಟನೆ ಮಾ.16ರಂದು ಸಂಜೆ ವೇಳೆ ಕುಂಭಾಶಿ ಗ್ರಾಮದ ವಿನಾಯಕ ನಗರ ಎಂಬಲ್ಲಿ ನಡೆದಿದೆ.
ವಿನಾಯಕ ನಗರದ ಮನ್ಸೂರ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಭರತ, ಚಂದ್ರಕಾಂತ, ಶಶಿಧರ, ಕೇಶವ, ಅರವಿಂದ ಮತ್ತು ಇತರ 4-5 ಮಂದಿ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದಿದ್ದು, ನಂತರ ಬಿಡಿಸಲು ಬಂದ ಮಗ ಶರೀಫ್ ಮತ್ತು ಪತ್ನಿ ನೂರ್ ಜಹಾನ್ ಎಂಬವರಿಗೂ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.