ಮಂಜೇಶ್ವರ: ಮೀಂಜದಲ್ಲಿ ಯಶಸ್ವಿ ರಕ್ತದಾನ ಶಿಬಿರ

Update: 2019-03-17 17:34 GMT

ಮಂಜೇಶ್ವರ: ಮೀಂಜ ಯೂತ್ ಕೊ-ಒರ್ಡಿನೇಷನ್ ಕಮಿಟಿ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೆನೆಪೋಯ ರಕ್ತನಿಧಿ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮೀಯಪದವು ಎಸ್.ವಿ.ವಿ.ಎಚ್.ಎಸ್ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಬ್ರಾಹಿಂ ಹೊನ್ನಕಟ್ಟೆ ವಹಿಸಿದ್ದರು. ಡಾ. ಜಯ ಪ್ರಕಾಶ್ ಉದ್ಘಾಟಿಸಿ ಮಾತನಾಡುತ್ತಾ ರಕ್ತದ ಅವಶ್ಯಕತೆ ಬರುವುದು ತುಂಬಾ ತುರ್ತು ಸಂದರ್ಭದಲ್ಲಿ,  ಅಪಘಾತವಾದಾಗ,  ತುರ್ತು ಚಿಕಿತ್ಸೆ ಆಪರೇಷನ್ ಇರುವಾಗ.  ಈ ಸಂದರ್ಭದಲ್ಲಿ ಸಂಬಂಧಪಟ್ಟ ಸಂಬಂಧಿಕರ ಅಳಲೂ ಹೇಳತೀರದು ಮತ್ತು ತುಂಬಾ ಗಾಬರಿಯ ಪರಿಸ್ಥಿತಿ ಇರುತ್ತದೆ.  ಅಂತಹ ಸಂದರ್ಭದಲ್ಲಿ ಯಾರಾದರೂ ಸಹಾಯಕ್ಕೆ ಸಿಕ್ಕಿದರೆ ಅವರೆ ಆಪತ್ಪಾಂದ ವರು.1900 ವರ್ಷಗಳ ಹಿಂದೆ ಈ ರಕ್ತ ನೀಡುವ ವ್ಯವಸ್ತೆಯೆ ಇರಲಿಲ್ಲ ಯಾಕೆಂದರೆ ಆಗ ಒಬ್ಬರ ರಕ್ತ ಇನ್ನೊಬ್ಬರಿಗೆ ನೀಡಬಹುದು ಎಂದು ಗೊತ್ತೆ ಇರಲಿಲ್ಲ ಹಾಗಾಗಿ ರಕ್ತದ ಅವಶ್ಯಕತೆ ಇದ್ದವರೆಲ್ಲ ಸಾವನ್ನಪ್ಪುತ್ತಿದ್ದರು.  ನಂತರ ರಕ್ತದ ಗುಂಪುಗಳನ್ನು ಕಂಡುಹಿಡಿದು ರಕ್ತವನ್ನು ಬೇರೆಯವರಿಗೂ ನೀಡಬಹುದು ಎಂದು ತಿಳಿಸಿಕೊಟ್ಟವರು ಕಾರ್ಲ್ ಲ್ಯಾಂಡ್  ಎಂದು ರಕ್ತದ  ಮಹತ್ವದ ಬಗ್ಗೆ ಹೇಳಿದರು.

ಮುಖ್ಯ ಅತಿಥಿಗಳಾಗಿ  ಅಮೀರ್ ಕುಲಬೈಲ್ ಸತ್ತಾರ್ ಹಾಜಿ, ಕಂಚೀಲ ಮುಹಮ್ಮದ್ ,ಹರೀಶ್,ಸಿದ್ದೀಕ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು ಭಾಗವಹಿಸಿದರು. ಪುಟಾಣಿ ಮಹಮ್ಮದ್ ಫಾಝಿಲ್ ರಕ್ತದಾನದ ಟಿ ಶರ್ಟ್ ಧರಿಸಿ ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಈ ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯದರ್ಶಿ ನವಾಝ್ ಕೊಲ್ಲರಕೋಡಿ, ಫಾರೂಕ್ ಬಿಗ್ ಗ್ಯಾರೇಜ್, ಸಿರಾಜ್ ಪಜೀರ್, ಸಲಾಂ ಎಂ ಎಚ್ ಕೊಲ್ಲರಕೋಡಿ, ಸಿದ್ದೀಕ್ ಜಿ ಪಿ ಕೊಲ್ಲರಕೋಡಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಅಮೀರ್ ಕುಲಬೈಲ್ ವಂದಿಸಿದರು, ನೌಷಾದ್ ಮೀಂಜ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News