ಮಾ.19ರಿಂದ ನವೀಕೃತ ಹೈದ್ರೋಸಿಯಾ ಜುಮಾ ಮಸೀದಿ ಸುಜೀರ್ ಮಳ್ಳಿ ಉದ್ಘಾಟನೆ, ಮತ ಪ್ರವಚನ

Update: 2019-03-18 10:57 GMT

ಫರಂಗಿಪೇಟೆ: ಪುದು ಗ್ರಾಮದ ಸುಜೀರ್ ಮಳ್ಳಿಯಲ್ಲಿ ನವೀಕೃತ ಹೈದ್ರೋಸಿಯಾ ಜುಮಾ ಮಸೀದಿ ಉದ್ಘಾಟನೆ ಮತ್ತು ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಮಾ. 19ರಿಂದ ಸುಜೀರ್ ಮಳ್ಳಿಯಲ್ಲಿ ನಡೆಯಲಿದೆ.

ಮಸೀದಿಯ ಗೌರವಾಧ್ಯಕ್ಷ ಅಲ್ ಹಾಜಿ ಅಬ್ದುಲ್ ರಝಾಕ್ ಮಲೇಶಿಯಾ ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಪೊಳ್ಯ ಮಸೀದಿ ಮುದರಿಸ್ ಯಹ್ಯಾ ತಂಙಳ್ ದುವಾ ನೆರವೇರಿಸಲಿದ್ದಾರೆ. ಅಂದು ಖ್ಯಾತ ವಾಗ್ಮಿ ಅಲ್ ಹಾಫಿಲ್ ಕುಮ್ಮನಮ್ ನಿಝಾಮುದ್ದೀನ್ ಅಲ್ ಅಝ್ಹರಿ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. 

ಮಾರಿಪ್ಪಳ್ಳ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ.

ಮಾ. 20ರಂದು ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ, ಮಾ. 21ರಂದು ಸುಜೀರ್ ಮಳ್ಳಿ ಖತೀಬ್ ಅಬೂಬಕ್ಕರ್ ಅಲ್ ಖಾಸಿಮಿ ಕರ್ವೇಲ್ ಪ್ರವಚನ ನೀಡಲಿದ್ದಾರೆ. ಮಾ. 22ರಂದು ಮಧ್ಯಾಹ್ನ 12 ಗಂಟೆಗೆ ಎಸ್ಕೆಜೆಯು ಪ್ರಧಾನ ಕಾರ್ಯದರ್ಶಿ ಶೈಕುಲ್ ಜಾಮಿಅ ಪ್ರೊ. ಕೆ ಆಲಿಕುಟ್ಟಿ ಮುಸ್ಲಿಯಾರ್ ನವೀಕೃತ ಮಸೀದಿಯ ಉದ್ಘಾಟನೆ ಮಾಡಲಿದ್ದಾರೆ.

ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಜುಮಾ ನೇತೃತ್ವ ವಹಿಸಲಿದ್ದಾರೆ. ಎಮ್ಐಸಿ ಕಾಸರಗೋಡ್ ಕೋಶಾಧಿಕಾರಿ ಸಯ್ಯದ್ ಅಲಿ ತಂಙಳ್ ಕುಂಬೋಳ್ ದುವಾ ನೆರವೇರಿಸಲಿದ್ದಾರೆ. ಜುಮಾ ನಮಾಝ್ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಹಾಜಿ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಕೆಜೆಯು ಕಾರ್ಯದರ್ಶಿ ಹಾಜಿ ಅಬ್ದುಲ್ಲಾ ಫೈಝಿ ಚೆಂಗಳ ಮಸ್ಕತ್ ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ದಾರಿಮಿ ಎಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಪಾತುರು ಮಾಹಿನ್ ದಾರಿಮಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಎಸ್ಕೆಜೆಯು ಪ್ರ.ಕಾರ್ಯದರ್ಶಿ, ಕೆಐಸಿ ಕುಂಬ್ರ ಪ್ರಿನ್ಸ್ ಪಾಲ್ ಹಾಜಿ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News