ಮಾ.30ರವರೆಗೆ ಬಂಟ್ವಾಳ ತಾಲೂಕಿನಾದ್ಯಂತ ಮತದಾರರ ಜಾಗೃತಿ

Update: 2019-03-18 13:45 GMT

ಬಂಟ್ವಾಳ, ಮಾ. 18: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಇವಿಎಂ ಮತಯಂತ್ರದ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಮಾರ್ಗ ದರ್ಶನ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ ಮತ್ತು ವಿಟ್ಲ ಹೋಬಳಿಗಳಲ್ಲಿ ಮಾ. 18ರಿಂದ ಆರಂಭಗೊಂಡಿದ್ದು, ಮಾ.30ರವರೆಗೆ ನಡೆಯಲಿದೆ.

ಬಂಟ್ವಾಳ ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಮಹೇಶ್ ಈ ಕುರಿತು ವಿವರಗಳನ್ನು ನೀಡಿದ್ದಾರೆ. ಅವರ ಸೂಚನೆಯಂತೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ಸ್ವೀಪ್ ಆರಂಭಗೊಂಡಿದೆ. ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಹಿತ ಚುನಾವಣೆಗೆ ಸಂಬಂಧಿತ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.

ಬಂಟ್ವಾಳ ಹೋಬಳಿ ವಿವರ:

ಮಾ. 18ರಂದು ಚೆನ್ನೈತೋಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. 19ರಂದು ಬೆಳಿಗ್ಗೆ ರಾಯಿ, ಮಧ್ಯಾಹ್ನ ಅರಳ, 20ರಂದು ಬೆಳಿಗ್ಗೆ ಸಂಗಬೆಟ್ಟು, ಮಧ್ಯಾಹ್ನ ಪಂಜಿಕಲ್ಲು, 21ರಂದು ಬೆಳಿಗ್ಗೆ ಕುಕ್ಕಿಪ್ಪಾಡಿ, ಸಂಜೆ ಇರ್ವತ್ತುರು, 22ರಂದು ಬೆಳಿಗ್ಗೆ ಪಿಲಾತಬೆಟ್ಟು, ಮಧ್ಯಾಹ್ನ ಬಡಗಕಜೆಕಾರು, 23ರಂದು ಬೆಳಗ್ಗೆ ಕಾವಳಮುಡೂರು, ಸಂಜೆ ಕಾವಳಪಡೂರು, 25ರಂದು ಬೆಳಿಗ್ಗೆ ಉಳಿ, ಮಧ್ಯಾಹ್ನ ಮಣಿನಾಲ್ಕೂರು, 26ರಂದು ಬೆಳಿಗ್ಗೆ ಸರಪಾಡಿ, ಮಧ್ಯಾಹ್ನ ನಾವುರು, 28ರಂದು ಬೆಳಿಗ್ಗೆ ಅಮ್ಟಾಡಿಯಲ್ಲಿ ಸ್ವೀಪ್ ಕಾರ್ಯಕ್ರಮ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಡೆಯಲಿದೆ.

ಪಾಣೆಮಂಗಳೂರು ಹೋಬಳಿ ವಿವರ:

ಮಾ. 18ರಂದು ಬೆಳಿಗ್ಗೆ ಕರಿಯಂಗಳ, ಮಧ್ಯಾಹ್ನ ಅಮ್ಮುಂಜೆಯಲ್ಲಿ ಕಾರ್ಯಕ್ರಮ ನಡೆಯಲಿದೆ. 19ರಂದು ಬೆಳಿಗ್ಗೆ ಬಡಗಬೆಳ್ಖೂರು, ಮಧ್ಯಾಹ್ನ ಕಳ್ಳಿಗೆ, 20ರಂದು ಬೆಳಿಗ್ಗೆ ಮೇರಮಜಲು, 21ರಂದು ಬೆಳಿಗ್ಗೆ ತುಂಬೆ, ಮಧ್ಯಾಹ್ನ ನರಿಕೊಂಬು, 22ರಂದು ಮಧ್ಯಾಹ್ನ ಬಾಳ್ತಿಲ, 23ರಂದು ಬೆಳಿಗ್ಗೆ ಬರಿಮಾರು, ಮಧ್ಯಾಹ್ನ ಕಡೇಶ್ವಾಲ್ಯ, 25ರಂದು ಬೆಳಿಗ್ಗೆ ಸಜೀಪಮೂಡ, ಮಧ್ಯಾಹ್ನ ಸಜೀಪಮುನ್ನೂರು, 26ರಂದು ಬೆಳಿಗ್ಗೆ ಮಂಚಿ, ಮಧ್ಯಾಹ್ನ ಪುದು, 27ರಂದು ಬೆಳಿಗ್ಗೆ ಗೋಳ್ತಮಜಲು, 28ರಂದು ಮಧ್ಯಾಹ್ನ ಪಜೀರು, 29ರಂದು ಬೆಳಿಗ್ಗೆ ಬಾಳೇಪುಣಿ, ಮಧ್ಯಾಹ್ನ ನರಿಂಗಾನ, ಅದೇ ದಿನ ಬೆಳಗ್ಗೆ ಸಜೀಪನಡು, ಮಧ್ಯಾಹ್ನ ಕುರ್ನಾಡು, 30ರಂದು ಬೆಳಿsಗ್ಗೆ ಸಜಿಪಪಡು ಅಪರಾಹ್ನ ಇರಾ ಗ್ರಾಪಂಗಳಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುವುದು.

ವಿಟ್ಲ ಹೋಬಳಿ ವಿವರ:

ವಿಟ್ಲ ಹೋಬಳಿಯ ಪುಣಚದಲ್ಲಿ 18 ರಂದು ಬೆಳಿಗ್ಗೆ, ಕೇಪುವಿನಲ್ಲಿ ಮಧ್ಯಾಹ್ನ, ಪೆರ್ನೆಯಲ್ಲಿ ಬೆಳಿಗ್ಗೆ, ಕೆದಿಲದಲ್ಲಿ ಮಧ್ಯಾಹ್ನ 19ರಂದು ಕಾರ್ಯಕ್ರಮ ನಡೆಯಲಿದೆ. 20ರಂದು ಇಡ್ಕಿದುವಿನಲ್ಲಿ ಬೆಳಿಗ್ಗೆ ಮತ್ತು ವಿಟ್ಲಮುಡ್ನೂರಿನಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆಯುವುದು.

21ರಂದು ಪೆರಾಜೆಯಲ್ಲಿ ಬೆಳಗ್ಗೆ, 22ರಂದು ನೆಟ್ಲಮುಡ್ನೂರಿನಲ್ಲಿ ಬೆಳಿಗ್ಗೆ, ಅನಂತಾಡಿಯಲ್ಲಿ ಮಧ್ಯಾಹ್ನ, 23ರಂದು ವೀರಕಂಭದಲ್ಲಿ ಬೆಳಿಗ್ಗೆ, ಬೋಳಂತೂರಿ ನಲ್ಲಿ ಮಧ್ಯಾಹ್ನ, ಕೊಳ್ನಾಡುವಿನಲ್ಲಿ 25ರಂದು ಬೆಳಿಗ್ಗೆ, ವಿಟ್ಲಪಡ್ನೂರಿನಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆಯುವುದು. 26ರಂದು ಸಾಲೆತ್ತೂರಿನಲ್ಲಿ ಬೆಳಿಗ್ಗೆ, ಕನ್ಯಾನ, ಅಳಕೆಗಳಲ್ಲಿ ಮಧ್ಯಾಹ್ನ, 27ರಂದು ಕರೋಪಾಡಿಯಲ್ಲಿ ಬೆಳಿಗ್ಗೆ, ಅಳಿಕೆ, ಮಾಣಿಯಲ್ಲಿ ಮಧ್ಯಾಹ್ನ ಮತ್ತು 28ರಂದು ಬೆಳಿಗ್ಗೆ ಪೆರುವಾಯಿ ಮಧ್ಯಾಹ್ನ ಮಾಣಿಲದಲ್ಲಿ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News