ಟಿಪ್ಪರ್ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2019-03-18 16:34 GMT

ಕಾರ್ಕಳ, ಮಾ.18: ಟಿಪ್ಪರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮುಡ್ರಾಲು ಹಡ್ಯಾಲು ರಸ್ತೆಯ ಗುನ್ನಾಡಿ ಎಂಬಲ್ಲಿ ಮಾ.18ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಸುಕೇಶ್ ಎಂದು ಗುರುತಿಸಲಾಗಿದೆ. ಬಜಗೋಳಿ ಕಡೆಯಿಂದ ಹಡ್ಯಾಲು ಕಡೆಗೆ ಹೋಗುತ್ತಿದ್ದ ಬೈಕಿಗೆ ಹಡ್ಯಾಲು ಕಡೆಯಿಂದ ಬಜಗೋಳಿ ಕಡೆಗೆ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸವಾರ ಸುಕೇಶ್ ಟಿಪ್ಪರಿನ ಹಿಂದಿನ ಚಕ್ರದಡಿಗೆ ಬಿದ್ದರೆನ್ನಲಾಗಿದೆ. ಆಗ ಟಿಪ್ಪರ್‌ನ ಚಕ್ರ ಆತನ ತಲೆ ಮೇಲೆ ಹರಿದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಸುಕೇಶ್ ಸ್ಥಳದಲ್ಲಿಯೇ ಮೃತಪಟ್ಟರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News