ದೇವಸ್ಥಾನದ ಕಾಣಿಕೆ ಡಬ್ಬಿ ಕಳವು

Update: 2019-03-18 16:49 GMT

ಕೋಟ, ಮಾ.18: ತೆಕ್ಕಟ್ಟೆ ಗ್ರಾಮದ ಮಹಾದೇವಿ ನಂದಿಕೇಶ್ವರ ದೇವಸ್ಥಾನ ಹಾಗೂ ಸತ್ಯ ಗಣಪತಿ ದೇವಸ್ಥಾನಕ್ಕೆ ಮಾ.17ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸೊತ್ತುಗಳನ್ನು ಕವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು 4 ಕಾಣಿಕೆ ಡಬ್ಬಗಳನ್ನು ಕಳವು ಮಾಡಿದ್ದಾರೆ. ಆದರೆ ಯಾವುದೇ ಚಿನ್ನಾಭರಣಗಳು ಕಳವಾಗಿಲ್ಲ. ನಾಲ್ಕು ಕಾಣಿಕೆ ಡಬ್ಬದೊಳಗೆ ಸುಮಾರು 20,000 ರೂ. ಇದ್ದಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News