ಮಾ.21ರಿಂದ ದ.ಕ. ಜಿಲ್ಲಾ ಖಾಝಿ ಸೌದಿಗೆ

Update: 2019-03-18 17:22 GMT

ಮಂಗಳೂರು, ಮಾ.18: ಮೂಡುಬಿದಿರೆಯ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಸಭೆಗಳು ಸೌದಿ ಅರೇಬಿಯಾದ ವಿವಿಧೆಡೆ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾ.21ರಿಂದ ಎ. 5ರವರೆಗೆ ಸೌದಿಗೆ ತೆರಳಲಿದ್ದಾರೆ.

ಈ ಸಂದರ್ಭ ಖಾಝಿ ಅವರು ಸ್ಥಳೀಯವಾಗಿ ನಿಶ್ಚಯಿಸಿದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಂಬಂಧಪಟ್ಟವರು ಸಹಕರಿಸಬೇಕು ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News